ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಳ್ಳಾರಿಯನ್ನ ಎರಡು ಭಾಗ ಮಾಡಿ ವಿಜಯನಗರ ಅನ್ನೋ ನೂತನ ಜಿಲ್ಲೆಯನ್ನಾಗಿ ಮಾಡಲಾಗಿದೆ. ಇದಕ್ಕೆ ಕೆಲವರು ಸಂತಸ ವ್ಯಕ್ತಪಡಿಸಿದ್ರೆ, ಇನ್ನು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ನಡುವೆ ನೂತನ ಜಿಲ್ಲೆಗೆ 6 ತಾಲೂಕುಗಳನ್ನ ಸೇರ್ಪಡೆಗೊಳಿಸಲಾಗಿದೆ.
ಸಚಿವ ಸಂಪುಟ ಬಳಿಕ ಮಾತ್ನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಕೊಟ್ಟೂರು, ಹೊಸಪೇಟೆ, ಹರಪ್ಪನಹಳ್ಳಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಹಾಗೂ ಹೂವಿನಹಡಗಲಿ ತಾಲೂಕುಗಳನ್ನ ಸೇರಿಸಲಾಗಿದೆ ಎಂದು ತಿಳಿಸಿದ್ರು. ಈ ಮೂಲಕ ವಿಜಯನಗರ ಅನ್ನೋ ಹೊಸ ಜಿಲ್ಲೆ ರಚಿಸಲಾಗಿದೆ ಎಂದರು.