ಪ್ರಜಾಸ್ತ್ರ ಸುದ್ದಿ
ನವದೆಹಲಿ: ಬಹುಕೋಟಿ ಮೇವು ಹಗರಣದಲ್ಲಿ ಅಪರಾಧಿಯಾಗಿರುವ ಬಿಹಾರ ಮಾಜಿ ಸಿಎಂ ಹಾಗೂ ಆರ್ ಜಿಡಿ ನಾಯಕ ಲಾಲು ಪ್ರಸಾದ ಯಾದವ, ಜಾಮೀನು ಅರ್ಜಿಯನ್ನ ಮುಂದೂಡಡಲಾಗಿದೆ.
ಡಿಸೆಂಬರ್ 11ಕ್ಕೆ ಜಾಮೀನು ಅರ್ಜಿಯನ್ನ ಜಾರ್ಖಂಡ್ ಹೈಕೋರ್ಟ್ ಮುಂದೂಡಿದೆ. 1992-93ರ ಅವಧಿಯಲ್ಲಿ ಲಾಲು ಸಿಎಂ ಆಗಿದ್ದಾಗ, ಚಾಯಿಬಾಸಾ ಖಜಾನೆಯಿಂದ ಅಕ್ರಮವಾಗಿ 33.67 ಕೋಟಿ ರೂಪಾಯಿ ಪಡೆದ ಪ್ರಕರಣದಲ್ಲಿ ಲಾಲು ಸೇರಿದಂತೆ 16 ಮಂದಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.