ಮುರುಘಾಮಠ ಸ್ವಾಮೀಜಿಗೆ ಬೇಲ್.. ಹಲವು ಷರತ್ತುಗಳು ಅನ್ವಯ

169

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದ ಮುರುಘಾಮಠದ ಶಿವಮೂರ್ತಿ ಸ್ವಾಮೀಜಿಗೆ ಹೈಕೋರ್ಟ್ ಜಾಮೀನು ನೀಡಿದೆ.

ಸ್ವಾಮೀಜಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಚಿತ್ರದುರ್ಗಕ್ಕೆ ಪ್ರವೇಶಿಸುವಂತಿಲ್ಲ. ಪಾಸ್ ಪೋರ್ಟ್ ಕೋರ್ಟ್ ವಶಕ್ಕೆ ಕೊಡಬೇಕು. ಜಾಮೀನು ಇಂದು ಸಿಕ್ಕರೂ ಇಂದೇ ಬಿಡುಗಡೆಯಿಲ್ಲ. ಇನ್ನೊಂದು ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಬಾಕಿ ಇದೆ. ಇಬ್ಬರು ಶೂರಿಟಿ ಇಡಬೇಕು. 10.2 ಲಕ್ಷ ರೂಪಾಯಿ ಬಾಂಡ್ ನೀಡಬೇಕು. ಕೋರ್ಟ್ ಗೆ ವಿಡಿಯೋ ಕಾನ್ಫ್ ರೆನ್ಸ್ ಮೂಲಕ ಹಾಜರಾಗಬೇಕು. ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡುವಂತಿಲ್ಲ. ಸಾಕ್ಷಿಗಳನ್ನು ಸಂಪರ್ಕಿಸುವಂತಿಲ್ಲ. ಇಂತಹ ಕೃತ್ಯಗಳು ಪುನಾರಾವರ್ತನೆಯಾಗಬಾರದು.

ಹೀಗೆ ಹಲವು ಷರತ್ತುಗಳನ್ನು ಹಾಕಿ ಜಾಮೀನು ನೀಡಿದೆ. ಲೈಂಗಿಕ ದೌರ್ಜನ್ಯ ಸಂಬಂಧ ಇಬ್ಬರು ಬಾಲಕಿಯರು ಮೈಸೂರಿನಲ್ಲಿ ಆಗಸ್ಟ್ 26, 2022ರಲ್ಲಿ ದೂರು ದಾಖಲಿಸಿದ್ದರು. ಸೆಪ್ಟೆಂಬರ್ 1, 2022ರಂದು ಸ್ವಾಮೀಜಿ ಬಂಧನವಾಯಿತು. ಅಲ್ಲಿಂದ ಇಲ್ಲಿಯ ತನಕ ಜೈಲಿನಲ್ಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!