ಪ್ರವಾಹದಿಂದ ಜನ ನರಳುತ್ತಿದ್ರೆ ಸರ್ಕಾರ ವರ್ಗಾವಣೆಯಲ್ಲಿ ಬ್ಯುಸಿ

292

ಬೆಂಗಳೂರು: ಪ್ರವಾಹ ಪರಿಸ್ಥಿತಿಯಿಂದ ಉತ್ತರ ಕರ್ನಾಟಕದ ಜನತೆ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಎಂ ಅವರು ಮುಖ್ಯ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ, ಪರಿಹಾರ ಕಾರ್ಯಕ್ಕೆ ಅಡ್ಡಿ ಮಾಡ್ತಿದ್ದಾರೆ ಅಂತಾ ಕೇಂದ್ರ ಮಾಜಿ ಸಚಿವ ವೀರಪ್ಪ ಮೊಯ್ಲಿ ಕಿಡಿ ಕಾರಿದ್ದಾರೆ.

ಏಕ ಪರಮಾದಿತ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರು ಸರಿಯಾಗಿ ಪ್ರವಾಹದ ಪರಿಹಾರ ಕೈಗೊಂಡಿಲ್ಲ. ಅಲ್ದೇ ಕೇಂದ್ರ ಸರ್ಕಾರ ನೆರೆಪೀಡಿತ ಜನರಿಗೆ ನೆರವು ನೀಡುವಲ್ಲಿ ವಿಫಲವಾಗಿದೆ. ಸರ್ಕಾರ ರಚನೆಯಾಗಿ ಎರಡು ವಾರಗಳು ಕಳೆದ್ರೂ ದಿಕ್ಕು ದೆಸೆಯಿಲ್ಲದೆ ಅತಂತ್ರ ಸ್ಥಿತಿಯಲ್ಲಿದೆ ಅಂತಾ ಹೇಳಿದ್ದಾರೆ.

ಪ್ರಧಾನ ಮಂತ್ರಿ, ಗೃಹ ಸಚಿವರು ರಾಜ್ಯಕ್ಕೆ ಪರಿಹಾರ ತಂಡ ಕಳುಹಿಸಿ ಸರ್ವೇ ನಡೆಸದೆ ರಾಜಕೀಯ ಕುತಂತ್ರ ಮಾಡ್ತಿದೆ ಅಂತಾ ಕೇಂದ್ರ ಮಾಜಿ ಸಚಿವ ವೀರಪ್ಪ ಮೊಯ್ಲಿ ಅವರು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!