ಬೆಂಗಳೂರು: ಪ್ರವಾಹದಿಂದ ಸಂಪೂರ್ಣವಾಗಿ ಬದುಕು ಬೀದಿಗೆ ಬಿದ್ದಿರುವ ಉತ್ತರ ಕರ್ನಾಟಕ ಭಾಗಕ್ಕೆ ಪರಿಹಾರ ಘೋಷಣೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಅದನ್ನ ತರುವಲ್ಲಿ ರಾಜ್ಯದ 25 ಜನ ಸಂಸದರು ಫೇಲ್ ಆಗಿರುವುದನ್ನ ಖಂಡಿಸಿ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯ್ತು.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದಿರ ಅವರ ನೇತೃತ್ವದಲ್ಲಿ ಉತ್ತರ ಕರ್ನಾಟಕ ಸಂಘ, ಸಂಸ್ಥೆಗಳ ಮಾಹಾ ಸಂಸ್ಥೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯ್ತು. ಈ ವೇಳೆ ಮಾತ್ನಾಡಿದ ಶಂಕರ ಬಿದರಿ ಅವರು, ಇಂಥಾ ಸಂಸದರನ್ನ ಆಯ್ಕೆ ಮಾಡಿರುವುದಕ್ಕೆ ಚಪ್ಪಲಿಲೆ ನಾವೇ ಹೊಡೆದುಕೊಳ್ಳಬೇಕು ಅಂತಾ ಆಕ್ರೋಶ ಹೊರ ಹಾಕಿದ್ರು.
ಪ್ರವಾಹ ಪರಿಸ್ಥಿತಿಯ ಮುಗಿದು ಎರಡು ತಿಂಗಳಾಗಿದೆ. ಹೀಗಿದ್ರೂ ಇನ್ನೂ ಪರಿಹಾರ ತರುವಲ್ಲಿ ಫೇಲ್ ಆಗಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯ್ತು. ಸಂಸದರು, ಕೇಂದ್ರ ಸರ್ಕಾರ ಏನ್ ಮಾಡ್ತಿದೆ ಅಂತಾ ವಾಗ್ದಾಳಿ ನಡೆಸಲಾಯ್ತು.