ಬೆಂಗಳೂರು:ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಈ ವೇಳೆ ಕೆಲ ಪ್ರಮುಖ ನಿರ್ಣಯಗಳನ್ನ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ.
ಆಶಾ ಕಾರ್ಯಕರ್ತೆಯರ ಗೌರವಧನದಲ್ಲಿ 500 ರೂಪಾಯಿ ಏರಿಕೆ
ಮಹಾತ್ಮ ಗಾಂಧಿ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ 22 ಖೈದಿಗಳ ಬಿಡುಗಡೆ
ಆನೆ ಹಾವಳಿ ತೆಡೆಗೆ ಮುಂದಾದ ರಾಜ್ಯ ಸರ್ಕಾರ
100 ಕೋಟಿ ರೂಪಾಯಿ ವೆಚ್ಚದಲ್ಲಿ 118 ಕಿಲೋ ಮೀಟರ್ ಬ್ಯಾರಿಕೇಡ್ ನಿರ್ಮಾಣ ಮೂಲಕ ಆನೆ ಹಾವಳಿ ತಡೆಗೆ ಕ್ರಮ
ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿಗೆ 387 ಕೋಟಿ ಅನುದಾನ ಬಿಡುಗಡೆಗೆ ಒಪ್ಪಿಗೆ
ಹಾನಗಲ್ಲ ತಾಲೂಕಿನ 172 ಕೆರೆಗಳಿಗೆ ನೀರು ತುಂಬಿಸಲು 387 ಕೋಟಿ ಒಪ್ಪಿಗೆ
ಇನ್ನು ಇದೇ ವೇಳೆ ಪ್ರವಾಹದ ಪರಿಹಾರಕ್ಕೆ ಸಂಬಂಧಿಸಿದಂತೆ ಸಚಿವರು ಸಿಎಂ ಎದುರು ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಏನ್ ಮಾಡೋದು ಹೇಳಿ. ಕೇಂದ್ರದಲ್ಲಿ ನಮ್ಮದೆ ಸರ್ಕಾರವಿದೆ. ಏನ್ ಮಾತ್ನಾಡಿದ್ರೂ ಹೆಚ್ಚು ಕಡಿಮೆಯಾಗುತ್ತೆ ಅಂತಾ ಅಸಹಾಯಕತೆ ಹೊರ ಹಾಕಿದ್ದಾರೆ ಎನ್ನಲಾಗ್ತಿದೆ.