ಬೆಂಗಳೂರು: ಉತ್ತರ ಕರ್ನಾಟಕ ಪ್ರವಾಹಕ್ಕೆ ಸಿಲುಕಿ ಪಡಬಾರದು ಪಾಡು ಪಟ್ಟಿದೆ. ಇದ್ರಿಂದ ಹೊರ ಬರಲು ಇನ್ನು ಒಂದೆರೆಡು ವರ್ಷ ಬೇಕು. ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರ ನಿರಂತರ ಕೆಲಸ ಮಾಡ್ತಿದೆ. ಇದೀಗ ಕೇಂದ್ರದಿಂದ ಒಂದು ವಾರದಲ್ಲಿಯೇ ಮಧ್ಯಂತರ ಪರಿಹಾರ ಘೋಷಣೆಯಾಗಲಿದೆಯಂತೆ.
ನಿನ್ನೆ ರಾತ್ರಿ ಇಸ್ರೋ ಅತಿಥಿ ಗೃಹದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿರುವ ಸಿಎಂ ಬಿ.ಎಸ್ ಯಡಿಯೂರಪ್ಪನವರು, ಈ ಬಗ್ಗೆ ಮಾತ್ನಾಡಿದ್ದಾರೆ. 5 ಸಾವಿರ ಕೋಟಿ ಮಧ್ಯಂತರ ಪರಿಹಾರ ಘೋಷಣೆಗೆ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಪ್ರಧಾನಿ ಸ್ಪಂದಿಸಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಒಂದು ವಾರದಲ್ಲಿ ಪರಿಹಾರ ಘೋಷಣೆ ಮಾಡಲಿದ್ದಾರೆ ಅಂತಾ ಸಿಎಂ ತಿಳಿಸಿದ್ದಾರೆ.