ಪ್ರಜಾಸ್ತ್ರ ಸುದ್ದಿ
ತುಮಕೂರು: ರಾಷ್ಟ್ರೀಯ ಹೆದ್ದಾರಿ ಹತ್ತಿರ ನಿಂತಿದ್ದ ಕ್ರೂಸರ್ ಗೆ ಟೆಂಪೋವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ಕೋರ ಹತ್ತಿರ ನಡೆದಿದೆ. ಗುರುವಾರ ನಸುಕಿನಜಾವ ರಾಷ್ಟ್ರೀಯ ಹೆದ್ದಾರಿ 4ರ ಹತ್ತಿರ ಅಪಘಾತ ನಡೆದಿದೆ.
ಕ್ರೂಸರ್ ಚಾಲಕ ಗಂಗಾವತಿ ಮೂಲದ ಶಂಕರ್, ಪಡಿತರ ವಿತರಣಾ ಕೇಂದ್ರದ ಮಾಲೀಕ ಸತೀಶ್ ಮೃತ ದುರ್ದೈವಿಗಳು. ಕ್ರೂಸರ್ ಹಿಂಬದಿಯ ಟೈಯರ್ ಪಂಚ್ಚರ್ ಆಗಿದೆ. ಹೀಗಾಗಿ ರಸ್ತೆ ಪಕ್ಕ ಗಾಡಿ ನಿಲ್ಲಿಸಿ ಟೈಯರ್ ಬದಲಿಸುವ ವೇಳೆ ಟೆಂಪೋ ಬಂದು ಡಿಕ್ಕಿ ಹೊಡೆದಿದೆ. ಕೋರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.