ನವದೆಹಲಿ: ಚಂದ್ರಯಾನ-2 ಹಿನ್ನೆಡೆಗೆ ವಿಜ್ಞಾನಿಗಳು ಸೇರಿದಂತೆ ಯಾರೂ ನಿರಾಶರಾಗುವ ಅಗತ್ಯವಿಲ್ಲವೆಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಕೊನೆಯ ಹಂತದವರೆಗೂ ನಡೆದ ಈ ಹೋರಾಟ ಮಹತ್ವದ ಸಾಧನೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ವಿಕ್ರಮ್ ಲ್ಯಾಂಡರ್ ಜೊತೆ ಮಾತ್ರ ಇಸ್ರೋ ಸಂಪರ್ಕ ಕಳೆದುಕೊಂಡಿದೆ. 130 ಕೋಟಿ ಭಾರತೀಯರ ವಿಶ್ವಾಸ ಕಳೆದುಕೊಂಡಿಲ್ಲವೆಂದು ಇಸ್ರೋ ವಿಜ್ಞಾನಿಗಳಿಗೆ ನೈತಿಕ ಬೆಂಬಲ ನೀಡಿದ್ದಾರೆ. 46 ದಿನಗಳ ನಿರಂತರ ಕಾರ್ಯಚರಣೆ ಬಳಿಕ ಕೊನೆಯ ಹಂತದವರೆಗೂ ನಡೆದ ಹೋರಾಟಕ್ಕೆ ಇಸ್ರೋ ವಿಜ್ಞಾನಿಗಳಿಗೆ ಹೃತ್ಪೂರ್ಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.