ಮೋದಿ ವಿರುದ್ಧ ಸಂಸದ ವಾಗ್ದಾಳಿ

320

ಚಾಮರಾಜನಗರ: ನೆರೆ ಪರಿಹಾರ ವಿಚಾರದಲ್ಲಿ ಆಗ್ತಿರುವ ವಿಳಂಬದ ವಿರುದ್ಧ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜನ ಎಲ್ಲವನ್ನೂ ನೋಡ್ತಿದ್ದಾರೆ. ಅವರೇನು ಕಣ್ಮುಚ್ಚಿ ಕುಳ್ತಿಲ್ಲ. ನಿಮ್ಮ ಆಟ ನೋಡ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ರಾಜ್ಯದಿಂದ ಆಯ್ಕೆಯಾದ 25 ಜನ ಸಂಸದರು ಏನು ಮಾಡಬೇಕು. ಒಮ್ಮೆಯೂ ಅವರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಿಲ್ಲ. ಕೇಂದ್ರ ಸಚಿವರು ಸರ್ವಪಕ್ಷ ನಿಯೋಗವನ್ನ ಈಗಾಗ್ಲೇ ಕರೆದುಕೊಂಡು ಹೋಗಬೇಕಿತ್ತು. ಆದ್ರೆ, ಸಚಿವರು ಸಬೂಬು ಹೇಳ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.




Leave a Reply

Your email address will not be published. Required fields are marked *

error: Content is protected !!