ರಾಜ್ಯದಲ್ಲಿ ನೀರು, ಹಾಲು, ವಿದ್ಯುತ್ ದರ ಏರಿಕೆ ಬಗ್ಗೆ ಸಿಎಂ ಏನಂದರು?

417

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ 19 ಸೋಂಕಿನಿಂದಾಗಿ ಜನರಿಗೆ ದೊಡ್ಡ ಹೊಡೆತ ಬಿದ್ದಿದೆ. ಆದಾಯ ಕಡಿಮೆಯಿದೆ. ಖರ್ಚು ಹೆಚ್ಚಾಗಿದೆ. ಎಲ್ಲದರ ಬೆಲೆ ಏರಿಕೆಯಾಗಿ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ನಡುವೆ ನೀರು, ಹಾಲು ಹಾಗೂ ವಿದ್ಯುತ್ ಏರಿಕೆ ಸಂಬಂಧ ಸರ್ಕಾರದ ಮುಂದೆ ಪ್ರಸ್ತಾವನೆ ಇಡಲಾಗಿದೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ನೀರು, ಹಾಲು, ವಿದ್ಯುತ್ ಏರಿಕೆ ಪ್ರಸ್ತಾವನೆ ಬಂದಿದೆ. ಯಾವುದೇ ರೀತಿಯಿಂದಲೂ ಅವಸರದ ತೀರ್ಮಾನ ತೆಗೆದುಕೊಳ್ಳುವುದಿಲ್ಲವೆಂದಿದ್ದಾರೆ. ಬಿಬಿಎಂಪಿ ಜಲಮಂಡಳಿ, ಎಸ್ಕಾಂ, ಕರ್ನಾಟಕ ಹಾಲು ಒಕ್ಕೂಟದಿಂದ ದರ ಏರಿಕೆ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಿಎಂ ಉತ್ತರಿಸಿದ್ದಿಷ್ಟು.




Leave a Reply

Your email address will not be published. Required fields are marked *

error: Content is protected !!