ಪ್ರಜಾಸ್ತ್ರ ಸುದ್ದಿ
ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಕಣ ರಂಗೇರಿದೆ. ಮುಂದಿನ ತಿಂಗಳು ಮತದಾನ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ, ಎಸ್ಪಿ ಪಕ್ಷಗಳ ನಡುವೆ ಜಿದ್ದಾಜಿದ್ದು ಕೂಡಿದೆ. ಯುಪಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಅನ್ನೋದು ಸುದ್ದಿ ಭಾರಿ ಸುದ್ದಿ ಮಾಡಿದೆ.
ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ, ನಾನು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಅವರು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೇರೆಯವರ ಮುಖ ನೋಡುತ್ತಿದ್ದೀರಾ? ಎಲ್ಲ ಕಡೆ ನನ್ನ ಮುಖವನ್ನೇ ನೋಡಬಹುದು ಎಂದಿದ್ದರು.
ಪ್ರಿಯಾಂಕಾ ಹೀಗೆ ಹೇಳುತ್ತಿದ್ದಲೇ ಯುಪಿ ರಾಜಕೀಯ ಕಣದಲ್ಲಿ ಹೊಸ ಅಲೆ ಎದ್ದಿತು. ಭಾರೀ ಚರ್ಚೆ ನಡೆದ್ವು. ಇದಕ್ಕೆ ಇಂದು ಸ್ಪಷ್ಟನೆ ನೀಡಿದ ಅವರು, ನಿನ್ನೆಯ ನನ್ನ ಹೇಳಿಕೆ ಸ್ವಲ್ಪ ಉತ್ಪ್ರೇಕ್ಷದಿಂದ ಕೂಡಿತ್ತು. ನಾನು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲವೆಂದು ತಿಳಿಸಿದ್ದಾರೆ.