ಬಾಬಾ ರಾಮದೇವಗೆ ಸುಪ್ರೀಂ ತರಾಟೆ

216

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಅಲೋಪತಿ ವಿರುದ್ಧ ಬಾಬಾ ರಾಮದೇವ್ ನೀಡಿರುವ ಹೇಳಿಕೆ ವಿರುದ್ಧ ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ. ರಾಮದೇವ್ ಅನುಸರಿಸುವ ಎಲ್ಲವೂ ಎಲ್ಲ ರೋಗಗಳನ್ನು ಗುಣಪಡಿಸುತ್ತದೆ ಎಂಬ ಗ್ಯಾರೆಂಟಿ ಏನು ಎಂದು ಪ್ರಶ್ನಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ್ ಅವರ ನೇತೃತ್ವದ ಪೀಠವು, ಬಾಬಾ ರಾಮದೇವ್ ಅವರು ಅಲೋಪತಿ ವೈದ್ಯರ ಮೇಲೆ ಏಕೆ ಆರೋಪ ಮಾಡುತ್ತಿದ್ದಾರೆ. ಎಲ್ಲ ವೈದ್ಯರನ್ನು ಕೊಲೆಗಡುಕರು ಎಂಬಂತೆ ದೋಷಿಸಿದರು. ಪತ್ರಿಕೆಗಳಲ್ಲಿ ಜಾಹೀರಾತುಗಳಿವೆ. ತನನ್ನು ತಾನು ನಿಯಂತ್ರಿಸಿಕೊಳ್ಳುವುದು ಒಳ್ಳೆಯದು ಎಂದಿದ್ದಾರೆ.

ಅಲೋಪಥಿ ಔಷಧಿ, ವೈದ್ಯರು ಹಾಗೂ ಕೋವಿಡ್ ಲಸಿಕೆ ವಿರುದ್ಧ ಅಭಿಮಾನ ನಡೆಸಲಾಗುತ್ತಿದೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂದು ಅಭಿಯಾನ ಹರಡಿಸಲಾಗುತ್ತಿದೆ ಎಂದು, ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ರೀತಿ ಹೇಳಲಾಗಿದೆ.




Leave a Reply

Your email address will not be published. Required fields are marked *

error: Content is protected !!