ಲಾಕ್ ಡೌನ್ ಉಲ್ಲಂಘನೆ: ಚಡಚಣ ಠಾಣೆ ಪಿಎಸ್ಐ ಅಮಾನತು

705

ವಿಜಯಪುರ: ಕರೋನಾ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಚಡಚಣ ಠಾಣೆ ಪಿಎಸ್ಐ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಹೀಗಾಗಿ ಅವರನ್ನ, ವಿಜಯಪುರ ಜಿಲ್ಲಾ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಆದ್ರೆ, ಕೆಲಸಕ್ಕೆ ಹಾಜರಾಗದೆ ಗೈರಾಗಿದ್ದಕ್ಕೆ ಇದೀಗ ಅಮಾನತು ಮಾಡಲಾಗಿದೆ.

ಪಿಎಸ್ಐ ಮಹಾದೇವ ಯಲಿಗಾರ ಅಮಾನಾತದ ಪೊಲೀಸ್ ಅಧಿಕಾರಿಯಾಗಿದ್ದಾರೆ. ವರ್ಗಾವಣೆ ಆದ್ಮೇಲೂ ಕೆಲಸಕ್ಕೆ ಹಾಜರಾಗದೆ ಗೈರಾಗಿದ್ದ ಪಿಎಸ್ಐ ಯಲಿಗಾರ ಅವರನ್ನ ವಿಜಯಪುರ ಎಸ್ಪಿ ಅನುಪಮ ಅಗರವಾಲ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!