ಪ್ರಜಾಸ್ತ್ರ ಅಪರಾಧ ಸುದ್ದಿ
ಇಂಡಿ: ಭೀಮಾತೀರದ ಹಂತಕ ಮಹಾದೇವ ಭೈರಗೊಂಡ ಮೇಲೆ ನವೆಂಬರ್ 2ರಂದು ನಡೆದ ಶೂಟೌಟ್ ಪ್ರಕರಣದ ಪ್ರಮುಖ ಆರೋಪಿಯನ್ನು ಗುಮ್ಮಟನಗರಿ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
33 ವರ್ಷದ ಮಡಿವಾಳಯ್ಯ ಅಲಿಯಾಸ್ ಮಡು ಹಿರೇಮಠ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ಒಂದು ಎಕ್ಸ್ ಯುವಿ 500 ಕಾರ್, ಒಂದು ಪಿಸ್ತೂಲ್, ಒಂದು ಜೀವಂತ ಗುಂಡು ಹಾಗೂ ಒಂದು ಮೊಬೈಲ್ ನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗುಂಡಿನ ದಾಳಿಯಲ್ಲಿ ಈತನದ್ದೇ ಪ್ರಮುಖ ಕೈವಾಡವಿದೆ ಎನ್ನಲಾಗ್ತಿದೆ. ಭೀಮಾತೀರದ ಹಂತಕ ಧರ್ಮರಾಜ ಚಡಚಣ ಬಲಗೈ ಬಂಟನಾಗಿದ್ದ ಮಡುಸ್ವಾಮಿ, ಚಡಚಣ ಸಹೋದರರ ಸೇಡು ತೀರಿಸುಕೊಳ್ಳುವ ಹಠಕ್ಕೆ ಬಿದ್ದು ಮಹಾದೇವ ಭೈರಗೊಂಡ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.
ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು ಕೊಲೆ ಆರೋಪದಡಿಯಲ್ಲಿ ಇದುವರೆಗೂ ಒಟ್ಟು 29 ಆರೋಪಿಗಳನ್ನ ಬಂಧಿಸಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗರವಾಲ್ ತಿಳಿಸಿದ್ದಾರೆ.