ಪ್ರಜಾಸ್ತ್ರ ಅಪರಾಧ ಸುದ್ದಿ
ಆಲಮೇಲ: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆಯಾಗಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಆಮಲೇಲ ಪಟ್ಟಣದ ದೇವಣಗಾಂವದಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಹೆಂಡ್ತಿಯ ಬರ್ಬರ ಹತ್ಯೆಗೈಯಲಾಗಿದೆ. 45 ವರ್ಷದ ಮಲ್ಲಕವ್ವ ಹರಗೋಲ ಎಂಬುವರ ಹತ್ಯೆಯಾಗಿದೆ.
ಸರಾಯಿ ಕುಡಿಯಲು ಹೆಂಡ್ತಿ ದುಡ್ಡು ಕೊಡದೇ ಇರುವುದಕ್ಕೆ ಪತಿ ಶಿವಪ್ಪ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗ್ತಿದೆ.
ಹತ್ಯೆಗೈದ ಪತಿ ಶಿವಪ್ಪ ಪರಾರಿಯಾಗಿದ್ದಾನೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.