ವಿಜಯಪುರ: ಲಾಕ್ ಡೌನ್ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಮದ್ವೆಗಳು ಅತ್ಯಂತ ಸರಳ ರೀತಿಯಲ್ಲಿ ನಡೆಯುತ್ತಿವೆ. ಇದರ ನಡುವೆ ಇಲ್ಲೊಬ್ಬರು ತಮ್ಮ ಮದ್ವೆಯ ದಿನದಂದು ಬಡಕುಟುಂಬಗಳಿಗೆ ಅಗತ್ಯ ವಸ್ತುಗಳನ್ನ ನೀಡಿದ್ದಾರೆ.
ವಿಜಯಪುರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ನವ ದಂಪತಿಗಳಾದ ಅನೀಲ ಹಾಗೂ ಲಕ್ಷ್ಮೀ ಬಡವರಿಗೆ ಅಗತ್ಯ ವಸ್ತುಗಳು ಪೂರೈಸಿದ್ದಾರೆ. ಕಳೆದ ಏಪ್ರಿಲ್ 16ರಂದು ಸರಳವಾಗಿ ವಿವಾಹವಾಗಿದ್ದ ದಂಪತಿಗಳು, ತಮ್ಮ ಮದುವೆಗೆ ಕೂಡಿಟ್ಟಿದ್ದ ಐವತ್ತು ಸಾವಿರ ರೂಪಾಯಿ ಮೌಲ್ಯದ ಅಗತ್ಯ ದಿನಸಿ ವಸ್ತುಗಳನ್ನ ನೀಡಿದ್ದಾರೆ.
ಗ್ರಾಮದ ಸುಮಾರು 80 ಬಡ ಕುಟುಂಬಗಳಿಗೆ ಅಕ್ಕಿ, ಬೆಲ್ಲ, ಸಕ್ಕರೆ, ಸಾಬೂನು, ಎಣ್ಣೆ, ಬೇಳೆ, ಹಿಟ್ಟು, ಉಪ್ಪು, ಬಿಸ್ಕತ್ ಸೇರಿದಂತೆ ಅಗತ್ಯ ಪದಾರ್ಥಗಳನ್ನು ವಿತರಣೆ ಮಾಡಿದ್ದಾರೆ. ನವ ದಂಪತಿಗಳ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಡಿಸಿದ್ದಾರೆ.