ಕೊಪ್ಪಳ: ಯಲಬುರ್ಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ಶಾಸಕ ಹಾಲಪ್ಪ ಆಚರ ಅವರು ಲ್ಯಾಪ್ ಟಾಪ್ ವಿತರಿಸುವ ಕಾರ್ಯಕ್ರಮಕ್ಕೆ ಬಂದಿದ್ರು. ಅದರಂತೆ ಅವರು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಿದ್ದಾರೆ. ಈ ವೇಳೆ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಆರ್ಭಟ ಶುರುವಾಯ್ತು.
ನಮ್ಗೂ ಲ್ಯಾಪ್ ಟಾಪ್ ಬೇಕು ಎಂದು ವಿದ್ಯಾರ್ಥಿಗಳು ಗಲಾಟೆ ಶುರು ಮಾಡಿದ್ರು. ಆಗ ಶಾಸಕರು ಸರ್ಕಾರ ಹೇಳಿರುವುದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಅಂತಾ ಹೇಳಿದ್ದಾರೆ. ಇದ್ರಿಂದ ಅಸಮಾಧಾನ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಶಾಸಕ ಹಾಲಪ್ಪ ಆಚಾರ ಅವರನ್ನ ಕೊಠಡಿಯಲ್ಲಿ ಬಂಧಿಸಿದ್ದಾರೆ. ಲ್ಯಾಪ್ ಟಾಪ್ ಕೊಡುವ ತನಕ ನಿಮ್ಮನ್ನು ಬಿಡುವುದಿಲ್ಲವೆಂದು ಪಟ್ಟು ಹಿಡಿದ್ದಾರೆ.
ವಿದ್ಯಾರ್ಥಿಗಳ ಮನವೊಲಿಸುವ ಕೆಲಸವನ್ನ ಪೊಲೀಸ್ರು ಎಷ್ಟೇ ಮಾಡಿದ್ರೂ ಅವರು ಒಪ್ಪಿಕೊಂಡಿಲ್ಲ. ಬಳಿಕ ಶಾಸಕರು ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೂ ಲ್ಯಾಪ್ ಟಾಪ್ ನೀಡುವ ಭರವಸೆ ನೀಡಿದ ಬಳಿಕ ಅವರನ್ನ ಬಿಟ್ಟಿದ್ದಾರೆ. ವಿದ್ಯಾರ್ಥಿಗಳ ಕಾಟಕ್ಕೆ ಶಾಸಕ ಹಾಲಪ್ಪ ಆಚರ ಹೈರಾಣಾಗಿ ಹೋಗಿದ್ದು ಮಾತ್ರ ಸತ್ಯ.