3 ದಿನದ ಬಳಿಕ ಸಿಕ್ಕ ಬಾಲಕನ ಮೃತದೇಹ

464

ಬ್ರೇಕಿಂಗ್ ನ್ಯೂಸ್:

ಸಿಂದಗಿ: ತಾಲೂಕಿನ ಬಂದಾಳ ಗ್ರಾಮದ ಹತ್ತಿರವಿರುವ ಕಾಲುವೆಗೆ ಜನವರಿ 25ರಂದು ಈಜಲು ಹೋಗಿ ನೀರಿನಲ್ಲಿ ಮುಳುಗಿ ಹೋಗಿದ್ದ 13 ವರ್ಷದ ಬಾಲಕ ರಾಜಕುಮಾರ ತಳವಾರ ಮೃತದೇಹ ಇಂದು ಸಿಕ್ಕಿದೆ.

ಕಳೆದ ಮೂರು ದಿನಗಳಿಂದ ಪೊಲೀಸ್ರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ರು. ಇಂದು ಮಧ್ಯಾಹ್ನ ಸುಮಾರು 12ಗಂಟೆಗೆ ಕಾಲುವೆಯಲ್ಲಿ ಜಿಗದ ಜಾಗದಿಂದ ಸುಮಾರು 1.5 ಕಿಲೋ ಮೀಟರ್ ದೂರದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.

ಬಾಲಕನ ಮೃತದೇಹವನ್ನ ತಾಲೂಕು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬರಲಾಗಿದೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆತ್ತವರ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮೂವರು ಸ್ನೇಹಿತರೊಂದಿಗೆ ಈಜಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.




Leave a Reply

Your email address will not be published. Required fields are marked *

error: Content is protected !!