ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಎಂ ಯಡಿಯೂರಪ್ಪ ರಾಜೀನಾಮೆ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಿದೆ. ಅವರ ಬೆಂಬಲಿಗರು ಹಾಗೂ ಸಿಎಂ ಸ್ಥಾನದಿಂದ ಕೆಳಗೆ ಇಳಿಸಬೇಕು ಅನ್ನೋರು ಒಂದೊಂದು ಮಾತುಗಳನ್ನ ಆಡುತ್ತಿದ್ದಾರೆ. ಈ ಬಗ್ಗೆ ಮಾತ್ನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ಯಡಿಯೂರಪ್ಪ ಹೇಳಿಕೆ ಹಿಂದೆ ತಂತ್ರಗಾರಿಕೆ ಇದೆ ಎಂದಿದ್ದಾರೆ.
ರಾಜಕಾರಣದಲ್ಲಿ ಬಹಳ ತಂತ್ರಗಳಿವೆ. ಹೇಳುವುದೊಂದು ಇದ್ದರೆ ಮಾಡೋದು ಮತ್ತೊಂದು ಇರುತ್ತೆ. ಯಡಿಯೂರಪ್ಪ ಅವರದ್ದು ಬೇರೆ ತಂತ್ರವಿದೆ. ಅವರ ನಾಯಕತ್ವದಲ್ಲಿ ಚುನಾವಣೆ ನಡೆದಿದೆ. ಅವರ ನಾಯಕತ್ವದಲ್ಲಿ ನಮ್ಮ ಪಕ್ಷದ ಸ್ನೇಹಿತರನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದ್ದಾರೆ.
ಯಡಿಯೂರಪ್ಪ ಗಟ್ಟಿ ಮನಸ್ಸು. ಅಷ್ಟು ಸಲಭಕ್ಕೆ ಜಗ್ಗುವ ಮನಷ್ಯ ಅಲ್ಲ. ಅವರ ಹೇಳಿಕೆ ಹಿಂದೆ, ನನ್ನನ್ನ ಮುಟ್ಟಿ ನೋಡು ಅನ್ನೋ ಎಚ್ಚರಿಕೆ ಇರಬಹುದು. ನಾನು ಪಕ್ಷದ ಶಿಪಾಯಿ ಅಂತಾನು ಇರಬಹುದು. ನೀವು ಹೀಗೆ ವಿಶ್ಲೇಷಣೆ ಮಾಡ್ತಿರೋ ಹಾಗೇ ಎಂದು ವಾಪಸ್ ಮಾಧ್ಯಮದವರ ಮೇಲೆಯೇ ಹಾಕಿದ್ರು.