ನವದೆಹಲಿ: ಯೆಸ್ ಬ್ಯಾಂಕ್ ನಿಂದ ಅಕ್ರಮ ಹಣ ವರ್ಗಾವಣೆ ಹಾಗೂ ನಷ್ಟ ಹೊಂದಿದ ಕಂಪನಿಗಳಿಗೆ ಸಾಲ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತುಂಬಾ ಸೂಕ್ಷ್ಮವಾಗಿ ಇವುಗಳ ವಿಚಾರಣೆ ನಡೆಸ್ತಿದೆ. ಇದೀಗ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಲನ್ಸ್ ಗ್ರೂಪ್ ಚೇರ್ ಮನ್ ಅನಿಲ ಅಂಬಾನಿಗೆ ನೋಟಿಸ್ ನೀಡಲಾಗಿದೆ.
ಯೆಸ್ ಬ್ಯಾಂಕ್ ನಲ್ಲಿ ಸಾವಿರಾರು ಕೋಟಿ ರೂಪಾಯಿ ವಸೂಲಾಗದ ಸಾಲವೆಂದಿದೆ. ಬ್ಯಾಂಕ್ ನಿಂದ ಸಾಲ ಪಡೆದು ತೀರಸಲಾಗದೆಯಿರುವ ಕಂಪನಿಗಳಲ್ಲಿ ರಿಲಯನ್ಸ್ ಕಂಪನಿಯೂ ಇದೆ. ಈ ಸಂಬಂಧ ಇಡಿ ಸಮನ್ಸ್ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಆರೋಗ್ಯದಲ್ಲಿ ಒಂದಿಷ್ಟು ಸಮಸ್ಯೆ ಇರುವುದ್ರಿಂದ ವಿಚಾರಣೆಗೆ ಹಾಜರಾಗಬೇಕಾದ ದಿನಾಂಕದಲ್ಲಿ ವಿನಾಯಿತಿ ಕೇಳಿದ್ದಾರೆ.
ಅನಿಲ ಅಂಬಾನಿಯ ಗ್ರೂಪ್ ಯೆಸ್ ಬ್ಯಾಂಕ್ ನಿಂದ 12 ಸಾವಿರದ 800 ಕೋಟಿ ರೂಪಾಯಿ ಸಾಲ ಪಡೆದಿದೆ. ಆದ್ರೆ, ಇದನ್ನ ಹಿಂತಿರುಗಿಸಿಲ್ಲ. ಇದು ಬ್ಯಾಂಕಿನ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಿದೆ. ಈ ಬಗ್ಗೆ ಮಾರ್ಚ್ 6 ರಂದು ತಿಳಿಸಿದ್ದ ಕೇಂದ್ರ ವಿತ್ ಸಚಿವೆ ನಿರ್ಮಲಾ ಸೀತಾರಾಮನ್, ಎಸ್ಸೆಲ್, ವೂಡಾಫೋನ್ ಕಾರ್ಪೂರೇಟ್, ಡಿಹೆಚ್ಎಫ್ಎಲ್ ಹಾಗೂ ಐಎಲ್ಎಫ್ಎಸ್, ರಿಲಯನ್ಸ್ ಕಂಪನಿಗಳು ಪಡೆದ ಸಾಲದಿಂದ ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿದೆ ಎಂದು ತಿಳಿಸಿದ್ರು.