ರಾಜ್ಯದಲ್ಲಿ ಕರೋನಾ ಕಾರ್ಮೋಡ: ಕೇಂದ್ರದಿಂದ ಹಣ ಬಿಡುಗಡೆ

327

ಬೆಂಗಳೂರು: ರಾಜ್ಯದ ತುಂಬಾ ಇದೀಗ ಕರೋನಾ ವಿಷ್ಯ. ಜನರು ಸಹ ಇದ್ರಿಂದ ರೋಸಿ ಹೋಗಿದ್ದಾರೆ. ರಾಜ್ಯ ಸರ್ಕಾರ ಮುಂಜಾಗೃತ ಕ್ರಮವಾಗಿ ಒಂದಿಷ್ಟ ನಿರ್ಧಾರಗಳನ್ನ ತೆಗೆದುಕೊಂಡಿದೆ. ಇದರ ನಡುವೆ ಕೇಂದ್ರ ಸರ್ಕಾರ ಕರೋನಾ ವೈರಸ್ ನಿಯಂತ್ರಣಕ್ಕೆ ಹಣ ಬಿಡುಗಡೆ ಮಾಡಿದೆ.

ಈ ಬಗ್ಗೆ ಮಾತ್ನಾಡಿರುವ ಕಂದಾಯ ಸಚಿವ ಆರ್.ಅಶೋಕ, ಕರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರವು 84 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ. ಎಸ್ ಡಿಆರ್ ಎಫ್ ಹಣದಲ್ಲಿ ಶೇಕಡ 25ರಷ್ಟು ಬಳಸಲು ಕೇಂದ್ರವು ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.

ಕರೋನಾ ವೈರಸ್ ರಾಷ್ಟ್ರೀಯ ವಿಪತ್ತು ಎನ್ನುವ ಕಾರಣಕ್ಕೆ ಎಸ್ ಡಿಆರ್ ಎಫ್ ಹಣದಲ್ಲಿ ಶೇಕಡ 25ರಷ್ಟು ಬಳಕೆ ಮಾಡಲು ಅನುಮತಿ ನೀಡಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಜೊತೆ ಸಭೆ ನಡೆಸಿ, ಹಣ ಬಳಕೆ ಮಾಡುವ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಕಂದಾಯ ಸಚಿವರು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!