ಪ್ರಜಾಸ್ತ್ರ ಸುದ್ದಿ
ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೇಶಗೌಡ ಹತ್ಯೆ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಬೇಲ್ ಅರ್ಜಿಯ ವಿಚಾರಣೆ ಸೋಮವಾರ ನಡೆಯುತ್ತಿದೆ. 14 ದಿನಗಳ ನ್ಯಾಯಾಂಗ ಬಂಧನ ಅವಧಿ ಸೋಮವಾರ ಮುಗಿಯುತ್ತಿದ್ದು, ಜೈಲಾ ಬೇಲಾ ಅನ್ನೋ ಪ್ರಶ್ನೆ ಮೂಡಿದೆ.
ಜಾಮೀನು ಕೋರಿ ಮಾಜಿ ಸಚಿವ ಪರ ವಕೀಲ ಭರತಕುಮಾರ ಎಂಬುವರು ಅರ್ಜಿ ಸಲ್ಲಿಸಿದ್ದಾರೆ. ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಲಿದೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ 14 ದಿನಗಳಿಂದ ಬಂಧಿಯಾಗಿರು ಮಾಜಿ ಸಚಿವರು ಹೊರಗೆ ಬರುತ್ತಾರಾ? ಇನ್ನಷ್ಟು ದಿನ ಒಳಗೆ ಬಂಧಿಯಾಗ್ತಾರಾ ಅನ್ನೋ ಕುತೂಹಲವಿದೆ.