ಯತ್ನಾಳ ವೈಡ್ ಬಾಲ್ ಹಾಕ್ತಾರೆ: ವಿನಯ್ ಕುಲ್ಕರ್ಣಿ

409

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಆರೇಳು ತಿಂಗಳಲ್ಲಿ ರಾಜ್ಯ ಸರ್ಕಾರ ಬೀಳುತ್ತೆ ಎಂದು ಹೇಳಿರುವ ಬಸವನಗೌಡ ಪಾಟೀಲ ಯತ್ನಾಳ ಹೇಳಿಕೆ ಸಂಬಂಧ ಧಾರವಾಡ ಕಾಂಗ್ರೆಸ್ ಶಾಸಕ ವಿನಯ್ ಕುಲ್ಕರ್ಣಿ ಮಾತನಾಡಿದ್ದು, ಯತ್ನಾಳ ವೈಡ್ ಬಾಲ್ ಹಾಕ್ತಾರೆ. ಆದರೆ ವಿಕೆಟ್ ಬೀಳಲ್ಲ ಅಂತಾ ಹೇಳಿದರು.

ನಗರದಲ್ಲಿ ಶನಿವಾರ ಮಾತನಾಡಿದ, ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹಾಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರುವುದು ಗೊತ್ತಿಲ್ಲ. 13-14 ಮಾಜಿ ಶಾಸಕರು ಕಾಂಗ್ರೆಸ್ಸಿಗೆ ಬರಲಿದ್ದಾರೆ ಅಂತಾ ಹೇಳಿದರು.

ಇನ್ನು ಎರಡೂವರೆ ವರ್ಷದ ಬಳಿಕ ಹಿರಿಯ ಸಚಿವರು ರಾಜೀನಾಮೆ ಕೊಟ್ಟು ಹೊಸಬರಿಗೆ ಅವಕಾಶ ಕೊಡುವ ಹೇಳಿಕೆ ನೀಡಿರುವ ಸಚಿವ ಕೆ.ಹೆಚ್ ಮುನಿಯಪ್ಪ ಮಾತಿಗೆ ಪ್ರತಿಕ್ರಿಯಿಸಿದ ಇವರು, ಸಚಿವರ ಬದಲಾವಣೆಯಾದಾಗ ನನಗೆ ಅವಕಾಶ ಸಿಗಲಿದೆ. ಮುನಿಯಪ್ಪ ಹೇಳಿದಂತೆ ಟೀಂ ಬದಲಾವಣೆಯಾಗಬೇಕು. ಇದರಿಂದ ಎಲ್ಲರಿಗೂ ಅವಕಾಶ ಸಿಗುತ್ತೆ ಎಂದಿದ್ದಾರೆ. ಈ ಮೂಲಕ ಎರಡೂವರೆ ವರ್ಷದ ಬಳಿಕ ಹೊಸ ಸಚಿವ ಸಂಪುಟ ಪುನರ್ ರಚನೆಯಾಗಬೇಕು ಎನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!