ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದಿಂದ ಮಲಘಾಣ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದ ಸೇತುವೆ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳು ಗುರುವಾರ ಸಂಜೆ ದಾಳಿ ಮಾಡಿ, 8.640 ಲೀಟರ್ ಅಕ್ರಮ ಮದ್ಯ ವಶ ಪಡಿಸಿಕೊಂಡಿದ್ದಾರೆ.
ಯಂಕಂಚಿ ಗ್ರಾಮದ ಆರೋಪಿ ಬಸಪ್ಪ ಮರೆಪ್ಪ ಕಟ್ಟಿ ಎಂಬಾತನನ್ನ ವಶಕ್ಕೆ ಪಡೆಯಲಾಗಿದೆ. ಅಕ್ರಮ ಮದ್ಯದ ಜೊತೆಗೆ ಬೈಕ್ ಜಪ್ತಿ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗ್ತಿದೆ. ಈ ದಾಳಿ ವೇಳೆ ಸಿಂದಗಿ ವಲಯ ಅಬಕಾರಿ ಅಧಿಕಾರಿ ಆರತಿ ಖೈನೂರ, ಸಿಬ್ಬಂದಿ ಅನೀಲ ಪತ್ತಾರ, ಆರ್.ಕೆ ಅತಾಪಿ, ಎನ್.ಎಸ್ ಸಂತಲಗಾಂವ, ಎನ್.ಪಿ ಸೂರ್ಯವಂಶಿ ಹಾಗೂ ಎ.ಜೆ ಮನಗೂಳಿ ಭಾಗವಹಿಸಿದ್ರು.