ಪ್ರಜಾಸ್ತ್ರ ಅಪರಾಧ ಸುದ್ದಿ
ಪುತ್ತೂರು: ಸಣ್ಣ ಕಾರಣಕ್ಕೆ ಯುವಕನೊಬ್ಬನನ್ನು ಹತ್ಯೆ ಮಾಡಿದ ಘಟನೆ ನೆಹರು ನಗರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಹುಲಿ ವೇಷದ ಕುಣಿತದ ತಂಡದ ಸದಸ್ಯ ಅಕ್ಷಯ್ ಕಲ್ಲೇಗ ಹತ್ಯೆಯಾದ ಯುವಕ.
ವಾಹನ ಅಪಘಾತ ಸಂಬಂಧ ಸೋಮವಾರ ಸಂಜೆ ಅಕ್ಷಯ್ ಹೇಗೆ ಹತ್ಯೆ ಆರೋಪಿಗಳ ನಡುವೆ ಸಣ್ಣದಾಗಿ ಜಗಳವಾಗಿದೆ. ನಂತರ ರಾತ್ರಿ ಸುಮಾರು 11.30ರ ಹೊತ್ತಿನಲ್ಲಿ ನೆಹರು ನಗರದ ಹತ್ತಿರ ಕರೆದು ಅಪಘಾತದ ನಷ್ಟ ಕೊಡಬೇಕೆಂದು ಗಲಾಟೆ ಮಾಡಿದ್ದಾರೆ. ಅದು ವಿಕೋಪಕ್ಕೆ ಅಕ್ಷಯ್ ಕಲ್ಲೇಗ ಹತ್ಯೆಯಾಗಿದ್ದಾನೆ.
ಈ ಪ್ರಕರಣ ಸಂಬಂಧ ಈಗಾಗ್ಲೇ ಮೂವರನ್ನು ಬಂಧಿಸಲಾಗಿದೆ. ಚೇತನ್, ಮಂಜುನಾಥ್ ಹಾಗೂ ಮನೀಶ್ ಹತ್ಯೆಯ ಆರೋಪಿಗಳು. ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.