ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಗರದಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ವೈ.ಎಸ್ ವಿ ದತ್ತಾ, ಎಚ್.ನಾಗೇಶ್ ಹಾಗೂ ಮೋಹನ್ ಸೇರಿದಂತೆ ಅನೇಕರು ಅಧಿಕೃತವಾಗಿ ಶನಿವಾರ ಸಂಜೆ ಕಾಂಗ್ರೆಸ್ ಸೇರ್ಪಡೆಯಾದರು. ಜೆಡಿಎಸ್ ಶಾಸಕರಾಗಿದ್ದ ವೈ.ಎಸ್.ವಿ ದತ್ತಾ, ಬಿಜೆಪಿಯ ಮಾಜಿ ಸಚಿವ ಎಚ್.ನಾಗೇಶ್ ಹಾಗೂ ಮೋಹನ್ ಅವರು ಕಾಂಗ್ರೆಸ್ ಸೇರ್ಪಡೆಯಾದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಸ್ವಾಗತಿಸಿದರು. ನಂತರ ಮಾತನಾಡಿದ ದತ್ತಾ ಅವರು, ಸುಮಾರು 50 ವರ್ಷಗಳ ಕಾಲ ಒಂದೇ ಪಕ್ಷದಲ್ಲಿದ್ದವನು. ಒಂದು ಐತಿಹಾಸಕ ಕಾರಣಕ್ಕೆ, ಸರ್ವಾಧಿಕಾರಿಗಳ ಶಕ್ತಿಗೆ ಸೋಲಾಗಲಿ, ನಾನು ಮೊದಲಿನಿಂದಲೂ ಎಡಪಂಥೀಯ ಸಿದ್ಧಾಂತದಲ್ಲಿದ್ದವನು. ಹೀಗಾಗಿ ಯಾವುದೇ ಷರತ್ತುಗಳು ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾನೆ ಎಂದರು.
ನಂತರ ಮಾತನಾಡಿದ ಎಚ್.ನಾಗೇಶ್ ಅವರು, ಇದೊಂದು ನನಗೆ ಒಳ್ಳೆಯ ದಿನ. ನಾನು ಸ್ವಾತಂತ್ರ್ಯವಾಗಿ ಗೆದ್ದವನು. ನನಗೆ ಬೆಂಬಲ ನೀಡಿದವರು ಕಾಂಗ್ರೆಸ್ ನವರು. ನನ್ನ ತಂದೆ, ತಾಯಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕು ಅಂತಿದ್ದರು. ನಾನೊಬ್ಬ ದಲಿತರು ಹಾಗೂ ಅಲ್ಪಸಂಖ್ಯಾತರು ಸುರಕ್ಷಿತವಾಗಿದ್ದಾರೆ ಅಂದರೆ ಅದಕ್ಕೆ ಕಾಂಗ್ರೆಸ್ ಕಾರಣ. ಎಲ್ಲೆ ಟಿಕೆಟ್ ಕೊಟ್ಟರು ಕಾಯಾ ವಾಚಾ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದರು.
ಈ ವೇಳೆ ಕೆಪಿಸಿಸಿಯ ಹಲವು ಮುಖಂಡರು, ನಾಯಕರು, ಪಕ್ಷ ಸೇರ್ಪಡೆಯಾದ ನಾಯಕರ ಬೆಂಬಲಿಗರು, ಕಾರ್ಯಕರ್ತರು ಉಪಸ್ಥಿತರಿದ್ದರು.