ಮೈಸೂರು: ದಸರಾ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಆಯೋಜನೆ ಮಾಡಿರುವ ಯುವ ದಸರಾ ವೇದಿಕೆ ಮೇಲೆ ಪ್ರಪೋಸ್ ಮಾಡಿದ ಗಾಯಕನ ಬಂಧನಕ್ಕೆ ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ. ಯುವ ದಸರಾ ಸಮಿತಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ವಾಗ್ದಾಳಿ ಮಾಡಲಾಗ್ತಿದೆ.
ಜಯ ಕರ್ನಾಟಕ ಸಂಘಟನೆ ವತಿಯಿಂದ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಗಾಯಕನ ಬಂಧನಕ್ಕೆ ಆಗ್ರಹಿಸಲಾಯ್ತು. ವೈಯಕ್ತಿಕ ವಿಚಾರಕ್ಕೆ ದಸರಾ ವೇದಿಕೆ ಬಳಸಿಕೊಂಡಿದ್ದಕ್ಕೆ ಕೊಡಲೇ ಬಂಧಿಸಬೇಕೆಂದು ಆಗ್ರಹಿಸಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿಯ ಬಿಟ್ಟಿ ಪ್ರಚಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡವನ್ನ ಸರಿಯಾಗಿ ಮೊದ್ಲು ಮಾತ್ನಾಡುವುದನ್ನ ಕಲಿತು ಆಮೇಲೆ ಪೋಸ್ ಕೊಡುವುದನ್ನ ಕಲಿಯಲಿ ಅಂತಾ ವಾಗ್ದಾಳಿ ನಡೆಸಲಾಗ್ತಿದೆ. 2019ರಲ್ಲಿ ನಿಶ್ಚಾರ್ಥ ಮಾಡಿಸಿದ ಯುವ ದಸರಾ ಸಮಿತಿ 2020ಕ್ಕೆ ಮದುವೆ ಮಾಡಿಸುತ್ತೆ ಅಂತಾ ವ್ಯಂಗ್ಯ ಮಾಡಲಾಗ್ತಿದೆ.