ಪ್ರಜಾಸ್ತ್ರ ಸುದ್ದಿ
ದೊಡ್ಡಬಳ್ಳಾಪುರ: ಆನ್ಲೈನ್ ನಲ್ಲಿ ಕ್ಲಾಸ್ ಕೇಳುವ ಸಂಬಂಧ ರೂಮಿನೊಳಗೆ ಹೋದ ಬಾಲಕ ಜೋಕಾಲಿ ಉರುಳಿಗೆ ಸಿಲುಕಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ದರ್ಗಾ ಜೋಗಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮಂಜುನಾಥ ಎಂಬುವರ 10 ವರ್ಷದ ಮಗ ವಿಶ್ವಾಸ ನಿಗೂಢವಾಗಿ ಸಾವನ್ನಪ್ಪಿದ್ದಾನೆ.
ಜ್ಞಾನಗಂಗಾ ವಿದ್ಯಾಸಂಸ್ಥೆಯಲ್ಲಿ 5ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ, ಆನ್ಲೈನ್ ಕ್ಲಾಸ್ ನಲ್ಲಿ ಪಾಠ ಕೇಳುತ್ತಿದ್ದ. ಹೀಗಾಗಿ ನಿನ್ನೆ ಮಧ್ಯಾಹ್ನ 3ಗಂಟೆಗೆ ರೂಮಿಗೆ ಕಳುಹಿಸಲಾಗಿದೆ. ವಿದ್ಯಾರ್ಥಿ ವಿಶ್ವಾಸ ಸುಮಾರು ಹೊತ್ತಾದ್ರೂ ಹೊರಗೆ ಬರದಿರುವುದಕ್ಕೆ ಪೋಷಕರು ರೂಮಿಗೆ ಹೋಗಿ ನೋಡಿದ್ರೆ, ರೂಮಿನಲ್ಲಿನ ಜೋಕಾಲಿ ಉರುಳಿಗೆ ಸಿಲುಕಿ ಸಾವನ್ನಪ್ಪಿದ್ದ.
ವಿಶ್ವಾಸ ಸಾವಿನ ಬಗ್ಗೆ ಸಂಶಯ ಮೂಡಿದ್ದು, ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗ್ತಿದೆ.