ಪ್ರಜಾಸ್ತ್ರ ಅಪರಾಧ ಸುದ್ದಿ
ಬೆಂಗಳೂರು: ಫೋಟೋಶೂಟ್ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಘಟನೆ ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಭಾನುವಾರ ಸಂಜೆ ನಡೆದಿದೆ.
ತಾಲೂಕಿನ ರಾಮೇಶ್ವರ ಗ್ರಾಮದ ಡಾಬಾವೊಂದರ ಹತ್ತಿರ ಈ ಘಟನೆ ನಡೆದಿದ್ದು, ಕಚೇರಿಪಾಳ್ಯದ ನಿವಾಸಿ 22 ವರ್ಷದ ಸೂರ್ಯ ಹತ್ಯೆಯಾದ ಯುವಕ. ಐಟಿಐ ಓದುತ್ತಿದ್ದ ಸೂರ್ಯ, ದೀಪಾವಳಿ ಹಬ್ಬದ ನಿಮಿತ್ತ ಫೋಟೋಶೂಟ್ ಮಾಡಲು ರಾಮೇಶ್ವರ ಗ್ರಾಮಕ್ಕೆ ಬಂದಿದ್ದ.
ಈ ವೇಳೆ ಮತ್ತೊಂದು ಗುಂಪು ಫೋಟೋ ತೆಗೆಯೆಂದು ಗಲಾಟೆ ಶುರು ಮಾಡಿದ್ದಾರೆ. ಗೊತ್ತೇ ಇಲ್ಲದ ಗುಂಪು ಗಲಾಟೆ ಮಾಡಿ ಸೂರ್ಯನ ಮೇಲೆ ಹಲ್ಲೆ ಮಾಡಿದೆ. ಒಬ್ಬ ಎದೆಗೆ ಚಾಕು ಇರಿದಿದ್ದಾನೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ರಕ್ತಸ್ರಾವದಿಂದ ಸೂರ್ಯ ಮೃತಪಟ್ಟಿದ್ದಾನೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.