ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರೋನಾ ಸೋಂಕು ನಿಯಂತ್ರಣದ ಜೊತೆಗೆ ಲಸಿಕೆ ಕೊಡುವುದು ಸಹ ಅಷ್ಟೇ ಮುಖ್ಯವಾಗಿದೆ. ಈಗ ಎದುರಾಗಿರುವ ಲಸಿಕೆ ಕೊರತೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ಒಂದಿಷ್ಟು ಹಿನ್ನಡೆ ಉಂಟು ಮಾಡಿದೆ. ಆದ್ರೂ, ನವೆಂಬರ್ ವೊಳಗೆ ರಾಜ್ಯದ ಪ್ರತಿಯೊಬ್ಬರಿಗೆ ಲಸಿಕೆ ಹಾಕಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ ಹೇಳಿದ್ದಾರೆ.
ಕೋವ್ಯಾಕ್ಸಿನ್ ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗಲಿದೆ. ಭಾರತ್ ಬಯೋಟೆಕ್ ಜೊತೆಗೆ ಮಾತುಕತೆ ನಡೆದಿದೆ. ತುರ್ತು ಲಸಿಕೆ ನೀಡುವ ಭರವಸೆ ನೀಡಿದೆ. 500 ವಯಲ್ಸ್ ತುರ್ತಾಗಿ ಕೇಳಿದ್ದೇವೆ. ಅದು ಸಿಕ್ಕರೆ ಅರ್ಧ ಸಮಸ್ಯೆ ಬಗೆಹರಿದಂತೆ ಎಂದರು.