ರಾಮನಗರ: ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀಗಳ 111 ಅಡಿ ಎತ್ತರದ ಪುತ್ಥಳಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ನವೆಂಬರ್ 8ರಂದು ಶಂಕು ಸ್ಥಾಪನೆ ಮಾಡಲಾಗ್ತಿದೆ. ಸಿಎಂ ಬಿ.ಎಸ್ ಯಡಿಯೂರಪ್ಪ, ಡಿಸಿಎಂ ಅಶ್ವಥನಾರಾಯಣ ಶಂಕು ಸ್ಥಾಪನೆ ಮಾಡಲಿದ್ದಾರೆ. ಮಠದ ಪೀಠಾಧಿಪತಿಗಳಾದ ಸಿದ್ದಲಿಂಗ ಸ್ವಾಮಿಗಳು ಉಪಸ್ಥಿತರಿರಲಿದ್ದಾರೆ.
ಶ್ರೀಗಳ ಹುಟ್ಟೂರಾದ ರಾಮನಗರದ ವೀರಾಪುರದಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣವಾಗ್ತಿದೆ. ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಪುತ್ಥಳಿಯನ್ನ ಇಲ್ಲಿಯೇ ನಿರ್ಮಿಸಲಾಗ್ತಿದೆ. ಹೊನ್ನಪ್ಪ ಮತ್ತು ಗಂಗಮ್ಮ ದಂಪತಿಯ ಪುತ್ರರಾದ ಶ್ರೀಗಳು, ಬಿಎ ಪದವಿ ಬಳಿಕ ಸನ್ಯಾಸತ್ವ ಸೀಕರಿಸಿದ್ರು. ಆದಾದ ಬಳಿಕ 1930ರಿಂದ 55ರ ವರೆಗೆ ಹುಟ್ಟೂರಿಗೆ ಬರ್ಲಿಲ್ಲ. ಭಕ್ತರ ಬೇಡಿಕೆ ಬಳಿಕ ಒಮ್ಮೆ ಹುಟ್ಟೂರಿಗೆ ಭೇಟಿ ನೀಡಿದ್ರು.