ಸಿಂದಗಿ: ನನ್ನ ಮೇಲೆ ಆರೋಪ ಮಾಡುವ ಮೊದ್ಲು, ಶಾಸಕ ಎಂ.ಸಿ ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಬಿಜೆಪಿ ಯುವ ಮುಖಂಡ ಸಂತೋಷ ಪಾಟೀಲ ಡಂಬಳ ಹೇಳಿದ್ದಾರೆ.
ತಮ್ಮ ಮೇಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮಗೋಷ್ಠಿ ನಡೆಸಿದ ಅವರು, ನಮ್ಮ ಮನೆತನದವರು ಹೇಗೆ ಅನ್ನೋದು ಜನರಿಗೆ ಗೊತ್ತಿದೆ. ನಮ್ಮ ಅಜ್ಜ, ತಂದೆಯಿಂದ ಹಿಡಿದು ಹೋರಾಟ ಮಾಡಿಕೊಂಡು ಬಂದವರು. ಇಷ್ಟೊಂದು ಕೆಳ ಮಟ್ಟದ ಹೇಳಿಕೆ ಕೊಡ್ತಾರೆ ಎಂದುಕೊಂಡಿರ್ಲಲ್ಲ ಅಂತಾ ಹೇಳಿದ್ರು.
ಚಿಕ್ಕ ಡ್ಯಾಂ ಆರೋಪ ಸತ್ಯಕ್ಕೆ ದೂರವಾದದ್ದು. ನಮ್ಮ ಏಳಿಗೆ ಸಹಿಸದೆ ಹೀಗೆ ಮಾಡ್ತಿದ್ದಾರೆ. ಇವರ ಕುಟುಂಬದಲ್ಲಿ ಉಜ್ವಲ್ ಗ್ಯಾಸ್ ಯೋಜನೆಯ ಫಲಾನುಭವಿಗಳಿದ್ದಾರೆ. ಅದಕ್ಕೆ ದಾಖಲೆಗಳಿವೆ ಅಂತಾ ಹೇಳಿದ್ರು. ನಮ್ಮ ಮನೆತನ ಈ ಮೊದ್ಲು ಯಾವ ಪಕ್ಷದೊಂದಿಗೂ ಗುರುತಿಸಿಕೊಂಡಿಲ್ಲ. ಬಿಜೆಪಿಯವರು ನನ್ಗೆ ಕರೆದು ಸ್ಥಾನ ನೀಡಿದ್ರು. ಕರ್ನಾಟಕ ರಕ್ಷಣಾ ವೇದಿಕೆ ಬಗ್ಗೆ ಹಗುರವಾಗಿ ಮಾತ್ನಾಡಬೇಡಿ. ಕನ್ನಡ ನನ್ನ ತಾಯಿ. ಭಾರತಾಂಬೆ ನನ್ನ ದೊಡ್ಡವ್ವ ಅಂತಾ ಹೇಳಿದ್ರು.
ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಹಾಗೂ ಶಾಸಕರಾದ ಎಂ.ಸಿ ಮನಗೂಳಿ ಅವರ ಮೂರ್ತಿ ಸುಟ್ಟ ಪ್ರಕರಣ ಸಂಬಂಧ, ಗೃಹ ಸಚಿವರಿಗೆ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಕೊಡಲು ನಾಳೆ ಹೊರಟಿದ್ದೇವೆ. ನಮ್ಮ ಜೊತೆ ಸಹಕಾರ ಕೊಡ್ತೀವಿ ಅಂತಾ ಹೇಳಿದ್ದಾರೆ. ಅವರಿಗಾಗಿ ನಾವು ಕಾಯುತ್ತೇವೆ. ನವೆಂಬರ್ 29ಕ್ಕೆ ಪ್ರಕರಣ ನಡೆದ ಒಂದು ವರ್ಷವಾಗುತ್ತೆ. ಅಂದಿನಿಂದ ನಾವು ಧರಣಿ ನಡೆಸುತ್ತೇವೆ ಅಂತಾ ಹೇಳಿದ್ರು.
ಈ ವೇಳೆ ಸಿದ್ದು ಬುಳ್ಳ, ಶ್ರೀಶೈಲ ಚಳ್ಳವಿ, ಗೌಡಣ್ಣ ಆಲಮೇಲ, ರವಿ ನಾಯ್ಕೋಡಿ, ಎಂ.ಪಿ ರಾಠೋಡ, ಪರಶುರಾಮ ಕೊಟರಗಸ್ತಿ, ಸಂದೀಪ ಚೌರ, ರಾಚನಗೌಡ ಪಾಟೀಲ, ಮಡಿವಾಳಪ್ಪ ಬಿರಾದರ ಸೇರಿದಂತೆ ಅನೇಕರು ಭಾಗವಹಿಸಿದ್ರು.