ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ ಇದೀಗ ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. 12 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ಗ್ರಾಮಾಂತರ ಎಸ್ಪಿ ಆಗಿದ್ದ ರವಿ ಡಿ.ಚನ್ನಣ್ಣನವರರನ್ನ ಸಿಐಡಿ ಎಸ್ಪಿಯಾಗಿ ವರ್ಗ ಮಾಡಲಾಗಿದೆ. ಬೆಂಗಳೂರಿನ ಅಪರಾಧ ತನಿಖಾ ಇಲಾಖೆಯ ರಾಹುಲಕುಮಾರ ಶಹಾಪೂರ್ವದ ಅವರನ್ನ ತುಮಕೂರು ಎಸ್ಪಿಯಾಗಿ ವರ್ಗ, ಕೋಲಾರ ಜಿಲ್ಲೆ ಎಸ್ಪಿ ಕಾರ್ತಿಕ ರೆಡ್ಡಿ ಅವರನ್ನ ಬೆಂಗಳೂರಿನ ವೈಯರ್ ಲೆಸ್ ವಿಭಾಗದ ಎಸ್ಪಿಯಾಗಿ ವರ್ಗ.
ಮೈಸೂರು ಎಸ್ಪಿಯಾಗಿ ಕರಾವಳಿ ಭದ್ರತಾ ಪಡೆಯ ಎಸ್ಪಿಯಾಗಿದ್ದ ಆರ್.ಚೇತನ ವರ್ಗ, ಬೆಂಗಳೂರು ಎಸ್ಪಿ ಅಡ್ಡೂರು ಶ್ರೀನಿವಾಸಲು ಕಲಬುರಗಿ ಜಿಲ್ಲೆಯ ಕಾನೂನು ಸುವ್ಯಸ್ಥೆ ವಿಭಾಗದ ಡಿಸಿಪಿಯಾಗಿ ವರ್ಗಾವಣೆ, ದಾವಣಗೆರೆ ಜಿಲ್ಲೆ ಎಸ್ಪಿ ಹನುಮಂತರಾಯ ಹಾವೇರಿಗೆ, ಹಾವೇರಿಯ ಎಸ್ಪಿ ಕೆ.ಜಿ ದೇವರಾಜು ಬೆಂಗಳೂರಿನ ಸಿಐಡಿ ಎಸ್ಪಿಯಾಗಿ ವರ್ಗ.
ಮೈಸೂರು ಕಾನೂನು ಸುವ್ಯಸ್ಥೆ ವಿಭಾಗದ ಡಿಸಿಪಿಯಾಗಿ ಬೆಂಗಳೂರಿನ ಆತಂಕರಿಕ ಭದ್ರತಾ ಇಲಾಖೆಯ ಎಸ್ಪಿ ಪ್ರದೀಪ ಗುಂಟಿ ವರ್ಗ. ಕಲಬುರಗಿಯ ಡಿಸಿಪಿ ದೆಕ್ಕ ಕಿಶೋರಬಾಬು ಕೋಲಾರ ಎಸ್ಪಿಯಾಗಿ ವರ್ಗ. ತುಮಕೂರು ಡಾ.ಕೋನ ವಂಶಿ ಕೃಷ್ಣ ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ ವರ್ಗ. ಮೈಸೂರು ಎಸ್ಪಿ ಸಿ.ಬಿ ರಿಷ್ಯಂತ ದಾವಣಗೆರೆಗೆ ಹಾಗೂ ಮೈಸೂರು ಕಾನೂನು ಸುವ್ಯಸ್ಥೆ ವಿಭಾಗದ ಡಿಸಿಪಿ ಡಾ.ಎ.ಎನ್ ಪ್ರಕಾಶಗೌಡ ಬೆಂಗಳೂರಿನ ಆಂತರಿಕ ವಿಭಾಗಕ್ಕೆ ವರ್ಗ ಮಾಡಿ ಆದೇಶಿಸಲಾಗಿದೆ.