Search

ಕಾರ್ ಡಿಕ್ಕಿ: ಆಹಾರ ಹುಡುಕಿಕೊಂಡು ಬಂದ ಹಸು ಸಾವು

330

ಹುಬ್ಬಳ್ಳಿ: ಲಾಕ್ ಡೌನ್ ನಿಂದಾಗಿ ಹುಬ್ಬಳ್ಳಿ-ಧಾರವಾಡ ಫುಲ್ ಟೈಟ್ ಇದೆ. ಅಗತ್ಯ ವಸ್ತುಗಳ ಪೂರೈಕೆ ಹೊರತು ಉಳಿದ್ಯಾವುದಕ್ಕೂ ಅವಕಾಶವಿಲ್ಲ. ಹೀಗಾಗಿ ಮೂಕಪ್ರಾಣಿಗಳಿಗೆ ಸರಿಯಾಗಿ ಆಹಾರ ಸಿಗ್ತಿಲ್ಲ. ಇದ್ರಿಂದಾಗಿ ಬಿಡಾದಿ ದನಗಳು ಹಸುವಿನಿಂದ ಬಳಲುತ್ತಿವೆ. ಅದೇ ರೀತಿ ಕಳೆದ ರಾತ್ರಿ ಆಹಾರ ಹುಡುಕೊಂಡು ಬಂದ ಹಸುವಿಗೆ ಕಾರು ಡಿಕ್ಕಿ ಹೊಡೆದಿದೆ.

ನಗರದ ಭೈರಿದೇವರಕೊಪ್ಪ ಬಳಿ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದಿದೆ. ಮೊದಲು ಹಸುವಿನಿಂದ ಬಳಲುತ್ತಿದ್ದ ಹಸು ತೀವ್ರಗಾಯಗೊಂಡಿದೆ. ಕಾರು ಚಾಲಕ ಗಾಡಿ ನಿಲ್ಲಸದೆ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಮಹೇಂದ್ರ ಎಂ, ಸಂತೋಷ, ಪ್ರಾಣಿ ಪ್ರೀಯ ಬಸವರಾಜ ಗೋಕಾವಿ ನೋಡಿ ಅದರ ನೆರವಿಗೆ ದಾವಿಸಿ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ, ಅಲ್ಲಿ ವೈದ್ಯರಿರಲಿಲ್ಲ. ಮೊದ್ಲೇ ಗಂಭೀರವಾಗಿ ಗಾಯಗೊಂಡಿದ್ದ ಹಸು ಸಾವನ್ನಪ್ಪಿದೆ.




Leave a Reply

Your email address will not be published. Required fields are marked *

error: Content is protected !!