ಕುಡಿಯುವ ನೀರಿಗೆ 185 ಕೋಟಿ

345

ಶಹಾಪುರ: ನಗರದ ಅಭಿವೃದ್ಧಿಗೆ ನಾನು ಸದಾ ಬದ್ಧನಾಗಿದ್ದೇನೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದ್ದಾರೆ.

ಲೋಕೋಪಯೋಗಿ ಇಲಾಖೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಆಶ್ರಯದಲ್ಲಿ ಶಹಾಪುರ ನಗರದ 2018-19ನೇ ಸಾಲಿನ ಎಚ್ಕೆಆರ್ಡಿಬಿ ಯೋಜನೆಯಡಿಯಲ್ಲಿ ಶಹಾಪುರದ ಲಕ್ಷ್ಮಿ ನಗರದಿಂದ ಹಾಲಬಾವಿ ರಸ್ತೆಗೆ ಸೇತುವೆ  ಲೋಕಾರ್ಪಣೆ ಮಾಡಿ ಮಾತನಾಡಿದರು. ಎಚ್ಕೆಡಿಬಿಯಿಂದ ನಗರ ಅಭಿವೃದ್ಧಿಗೆ 5 ಕೋಟಿ,  ಕುಡಿಯುವ ನೀರಿಗಾಗಿ 185 ಕೋಟಿ ಮಂಜೂರಾಗಿದ್ದು ಕೂಡಲೇ ಕಾಮಗಾರಿ ಪ್ರಾರಂಭಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಸಾಹು ಆರಬೋಳ, ಶಿವಮಾಂತ ಚಂದಾಪುರ, ಚನ್ನಬಸಪ್ಪ ಮೇಕಾಲೆ, ನಗರಸಭೆಯ ನೂತನ ಸದಸ್ಯರಾದ ಶಿವಕುಮಾರ್ ತಳವಾರ, ಬಸವರಾಜ ಚನ್ನೂರು, ಬಸವರಾಜ್ ಹೇರುಂಡಿ ಮಹಾದೇವಪ್ಪ ಸಾಲಿಮನಿ, ನ್ಯಾಯವಾದಿಗಳ ಚಂದ್ರಶೇಖರ ಲಿಂಗದಳ್ಳಿ ಉಪಸ್ಥಿತರಿದ್ರು.


TAG


Leave a Reply

Your email address will not be published. Required fields are marked *

error: Content is protected !!