ಬಿಜೆಪಿ, ಜೆಡಿಎಸ್ ಗೆ ಠಕ್ಕರ್ ಕೊಡಲು ರಮ್ಯಾ ಸ್ಪರ್ಧೆ?

167

ಪ್ರಜಾಸ್ತ್ರ ಸುದ್ದಿ

ಸಿನಿಮಾ, ರಾಜಕೀಯ ಕ್ಷೇತ್ರದಿಂದ ಕೆಲ ವರ್ಷಗಳ ಕಾಲ ದೂರ ಸರಿದಿದ್ದ ನಟಿ, ಮಾಜಿ ಎಂಪಿ ರಮ್ಯಾ ಸಧ್ಯ ಎರಡರಲ್ಲೂ ಕಂಬ್ಯಾಕ್ ಮಾಡಿದ್ದಾರೆ. ಸಿನಿಮಾ ನಿರ್ಮಾಣದ ಜೊತೆಗೆ ನಟನೆಗೂ ಮರು ಪ್ರವೇಶ ಕೊಟ್ಟಿದ್ದಾರೆ. ಮತ್ತೊಂದು ಕಡೆ ರಾಜಕೀಯ ವಿದ್ಯಮಾನಗಳ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸದಾ ಪೋಸ್ಟ್ ಮಾಡುತ್ತಲೇ ಇದ್ದಾರೆ.

ಇದೀಗ ನಟಿ ರಮ್ಯಾ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಠಕ್ಕರ್ ಕೊಡಲು ಕಾಂಗ್ರೆಸ್ ಪ್ಲಾನ್ ಮಾಡಿದ್ದು, ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಎಲ್ಲ ರೀತಿಯ ಸಿದ್ಧತೆ ನಡೆದಿದೆಯಂತೆ.

ಬೊಂಬೆಗಳ ನಗರಿ ಚನ್ನಪಟ್ಟಣದಿಂದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಇವರಿಗೆ ಸೋಲಿನ ರುಚಿ ತೋರಿಸಲು ನಟಿ, ಮಾಜಿ ಸಂಸದೆ ರಮ್ಯಾರನ್ನು ಕಣಕ್ಕೆ ಇಳಿಸಲು ಕೈ ನಾಯಕರು ಪ್ಲಾನ್ ಮಾಡಿದ್ದಾರಂತೆ. ಮೂರು ಪಕ್ಷಗಳಿಂದ ಒಕ್ಕಲಿಗ ಸಮುದಾಯದವರೆ ಸ್ಪರ್ಧಿಗಳಾಗುತ್ತಾರೆ, ಕಾಂಗ್ರೆಸ್ ಮತಗಳ ಜೊತೆಗೆ, ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನ. ಈ ಮೂಲಕ ಕಾಂಗ್ರೆಸ್ ಪೊಲಿಟಿಕಲ್ ಗೇಮ್ ಪ್ಲಾನ್ ನಡೆಸಿದೆಯಂತೆ.




Leave a Reply

Your email address will not be published. Required fields are marked *

error: Content is protected !!