ಪ್ರಜಾಸ್ತ್ರ ಸುದ್ದಿ
ವಿಜಯಪುರ: ಸುಲಿಗೆ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧಿಸಲಾಗಿದೆ.
ವಿಜಯಪುರ ಆದರ್ಶನಗರ ಪೊಲೀಸರಿಂದ ಬಂಧಿಸಲಾಗಿದೆ. ನಗರದಲ್ಲಿ ಅನುಮಾಸ್ಪದವಾಗಿ ಅಲೆದಾಡುವ ವೇಳೆಯಲ್ಲಿ ಬಂಧಿಸಲಾಗಿದೆ.
ಅಂಬಾಜಿ ಮಾಣಿಕ ಬೋಸ್ಲೆ, ಅರ್ಜುನ ಶ್ರೀಮಂತ ಕಾಳೆ, ಅಬೂಬಕರ್ ಬಾಷಾಸಾಬ್ ಮದಾರ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳಿಂದ 7.25 ಲಕ್ಷ ಮೌಲ್ಯದ 140.5 ಗ್ರಾಂ ಚಿನ್ನಾಭರಣ ಪೊಲೀಸರು ವಶ ಪಡಿಸಿಕೊಂಡಿದ್ದು, ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.