ಎಂಟಮಾನ ಹತ್ಯೆ ಕೇಸ್: 9 ಆರೋಪಿಗಳ ಬಂಧನ

620

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ಆಲಮೇಲ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಹಾಗೂ ರೌಡಿ ಶೀಟರ್ ಪ್ರದೀಪ ಯಂಟಮಾನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನ ಆರೋಪಗಳನ್ನು ಬಂಧಿಸಲಾಗಿದೆ.

ಎರಡು ದಿನಗಳ ಹಿಂದೆ ರಾತ್ರಿ ಸುಮಾರು 1 ಗಂಟೆಗೆ ಆಲಮೇಲ ಪಟ್ಟಣದ ಗಣೇಶ ನಗರದ‌ ಹತ್ತಿರವಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೊಲೆ ಮಾಡಲಾಗಿತ್ತು.‌

ಈ ಕುರಿತು ಆಲಮೇಲ ಪೋಲೀಸ್ ಠಾಣೆಯಲ್ಲಿ 13 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗ ಅದರಲ್ಲಿ 9 ಜನರನ್ನು ಬಂಧಿಸಲಾಗಿದೆ. ಭೀಮು ಮೇಲಿನಮನಿ, ಸಂಜು ಮೇಲಿನಮನಿ, ಗೌತಮ ಮೇಲಿನಮನಿ, ಮುತ್ತು ಮೇಲಿನಮನಿ, ಸಂಗಪ್ಪ ಮೇಲಿನಮನಿ, ಶಿವಪುತ್ರ ಮೇಲಿನಮನಿ, ವಿರೇಶ ಮೇಲಿನಮನಿ, ಸತೀಶ ಮೇಲಿನಮನಿ, ದೇವು ಮೇಲಿನಮನಿ ಬಂಧಿತ ಆರೋಪಿಗಳಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!