ಪ್ರಜಾಸ್ತ್ರ ಅಪರಾಧ ಸುದ್ದಿ
ಮೈಸೂರು: ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸೇರಿದಂತೆ ನಾಲ್ವರನ್ನ ಭೀಕರವಾಗಿ ಹತ್ಯೆಗೈದ ಘಟನೆ ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ. ಮಣಿಕಂಠ ಅನ್ನೋ ವ್ಯಕ್ತಿ ತನ್ನ ಮನೆಯವರನ್ನೇ ಹತ್ಯೆ ಮಾಡಿದ್ದಾನೆ.
ಕೆಂಪಮ್ಮ(68), ಗಂಗಾ(28) ರೋಹಿತ(1) ಹಾಗೂ ಸಾಮ್ರಾಟ(2) ಅನ್ನೋ ನಾಲ್ವರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಜಿಲ್ಲೆಯ ಸರಗೂರು ತಾಲೂಕಿನ ಸ್ವಾಮಿನಿಹುಂಡಿ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. ಸರಗೂರು ಠಾಣೆ ಪೊಲೀಸರು ಸ್ಥಳಕ್ಕೆ ಬಂದಿದ್ದು ಪರಿಶೀಲನೆ ನಡೆಸಿದ್ದಾರೆ.