ಪ್ರಜಾಸ್ತ್ರ ಸುದ್ದಿ
ಚಾಮರಾಜನಗರ: ಕರೋನಾ ಸಂಬಂಧಿತ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ 22 ಗ್ರಾಮ ಪಂಚಾಯ್ತಿಯ ಪಿಡಿಒಗಳಿಗೆ ಜಿಲ್ಲಾಧಿಕಾರಿ ಶೋಕಾಸ್ ನೋಟಿಸ್ ನೀಡಿದ್ದಾರೆ. ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಕಡ್ಲೂರು, ಚಂದಕವಾಡಿ, ಬಾಗಳಿ, ಕೆಂಪನಪುರ, ಉಮ್ಮತ್ತೂರು, ಸಾಗಡೆ, ಕೊಳ್ಳೇಗಾಲ, ದೊಡ್ಡಿಂದುವಾಡಿ, ಮಲೆಮಹೇಶ್ವರ ಬೆಟ್ಟ, ರಾಮಾಪುರ, ಕಣ್ಣೂರು, ಗುಂಬಳ್ಳಿ, ಬೇರಂಬಾಡಿ, ಕೆಲಸೂರು, ಹಂಗಳ, ಬರಗಿ, ಕಬ್ಬಳ್ಳಿ, ಹೆನ್ನೂರು, ಯರಗಂಬಳ್ಳಿ, ಅಗತನಗೌಡನಹಳ್ಳಿ ಸೇರಿದಂತೆ 22 ಗ್ರಾಮ ಪಂಚಾಯ್ತಿಯ ಪಿಡಿಒಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.