ಒಂದೆರಡು ದಿನಗಳಲ್ಲಿ ಸಚಿವರಿಗೆ ಖಾತೆ ಹಂಚಿಕೆ

232

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬುಧವಾರ ಮಧ್ಯಾಹ್ನ 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸಚಿವರಾದರು. ಇನ್ನು 4 ಸ್ಥಾನಗಳು ಖಾಲಿಯಿವೆ. ಈ ಬಗ್ಗೆ ಮಾತ್ನಾಡಿರುವ ಸಿಎಂ ಬೊಮ್ಮಾಯಿ ಒಂದೆರಡು ದಿನಗಳಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತೆ ಎಂದರು.

ನೂತನ ಸಚಿವರು ಪ್ರವಾಹ ವೀಕ್ಷಣೆ ಸಂಬಂಧ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಇದರ ಜೊತೆಗೆ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದಿದ್ದಾರೆ. ಇನ್ನು ಇಂತಹದ್ದೇ ಖಾತೆ ಬೇಕೆಂದು ಯಾರೂ ಕೇಳಿಲ್ಲ. ಹಿಂದಿನ ಖಾತೆಯಲ್ಲಿಯೇ ಮುಂದುವರೆಯುವುದಾಗಿಯೂ ಹೇಳಿಲ್ಲ. ಹೀಗಾಗಿ ಎರಡು ದಿನಗಳಲ್ಲಿ ಎಲ್ಲ ಮುಗಿಯಲಿದೆ ಎಂದರು.




Leave a Reply

Your email address will not be published. Required fields are marked *

error: Content is protected !!