ಪ್ರಜಾಸ್ತ್ರ ಅಪರಾಧ ಸುದ್ದಿ
ಮಂಡ್ಯ: ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕೆಆರ್ ಎಸ್ ನಲ್ಲಿ ನಾಲ್ವರು ಮಕ್ಕಳು, ಓರ್ವ ಮಹಿಳೆ ಸೇರಿ ಐವರನ್ನು ಕೊಲೆ ಮಾಡಲಾಗಿತ್ತು. ಈ ಘಟನೆ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಏನೂ ಅರಿಯದ ಮಕ್ಕಳನ್ನು ಸೇರಿ ಐವರನ್ನು ಕೊಂದವರು ಯಾರು ಅನ್ನೋ ಪ್ರಶ್ನೆಗೆ ಮೊದಲ ಹಂತದ ಉತ್ತರ ಸಿಕ್ಕಿದೆ.
ಅಮಾಯಕ ಮಕ್ಕಳು, ಮಹಿಳೆಯನ್ನು ಕೊಂದಿದ್ದು ಓರ್ವ ಮಹಿಳೆ. ಅಂದು ಗೋಳಾಡಿ ಅತ್ತು ನಾಟಕ ಮಾಡಿದ್ದ ಮಹಿಳೆಯೇ ಐವರ ಜೀವ ತೆಗೆದ ಹಂತಕಿ. ಆಕೆಯ ಹೆಸರು ಲಕ್ಷ್ಮಿ. ಗಂಗಾರಾಮ್ ಅನ್ನೋ ವ್ಯಕ್ತಿಯ ಪತ್ನಿ, ಮೂವರು ಮಕ್ಕಳು ಹಾಗೂ ಸಹೋದರನ ಮಗನನ್ನು ಕೊಂದಿದ್ದು ಇದೆ ಲಕ್ಷ್ಮಿ ಎನ್ನಲಾಗುತ್ತಿದೆ.
ಹಂತಕಿ ಲಕ್ಷ್ಮಿ ಹಾಗೂ ಗಂಗಾರಾಮ್ ಸಂಬಂಧಿಕರು. ಗಂಗಾರಾಮ್ ಹಾಗೂ ಲಕ್ಷ್ಮೀ ನಡುವೆ ಸಂಬಂಧವಿತ್ತು. ಆಕೆಗೆ ಬೇರೆ ಕಡೆ ಮದುವೆ ಮಾಡಿಕೊಟ್ಟರು. ಊರಲ್ಲಿ ರಾಜಿ ಪಂಚಾಯ್ತಿ ಮಾಡಿ ಲಕ್ಷ್ಮಿಗೆ ಸೀರೆ ಹಾಕಿಸಿದ್ದರಂತೆ.(ಸೀರೆ ಹಾಕಿದರೆ ಅಣ್ಣ ತಂಗಿ ಆಗುತ್ತಾರೆ) ಇತ್ತ ಇವನು ಮದುವೆ ಮಾಡಿಕೊಂಡು ಮಂಡ್ಯದಲ್ಲಿ ಕೆಆರ್ ಎಸ್ ನಲ್ಲಿ ವಾಸವಿದ್ದು ಬಟ್ಟೆ ವ್ಯಾಪಾರ ಮಾಡುತ್ತಿದ್ದ.
ಆದರೆ, ಆಗಾಗ ಲಕ್ಷ್ಮಿ ಕಾಲ್ ಮಾಡುತ್ತಿದ್ದಳಂತೆ. ಅದನ್ನು ಮನೆಯವರಿಗೂ ಹೇಳುತ್ತಿದೆ. ಓಪನ್ ಸ್ಪೀಕರ್ ಇಟ್ಟು ಮಾತನಾಡುತ್ತಿದ್ದೆ. ಅವಳ್ಯಾಕೆ ಹೀಗೆ ಮಾಡಿದಳು ಗೊತ್ತಿಲ್ಲ. ಇದರಲ್ಲಿ ನನ್ನದೇನು ತಪ್ಪಿಲ್ಲ. ಒಂದು ವೇಳೆ ತಪ್ಪಿದ್ದರೆ ನನಗೂ ಶಿಕ್ಷೆ ಕೊಡಿ ಎಂದು ಗಂಗಾರಾಮ್ ಹೇಳುತ್ತಿದ್ದಾನೆ. ಐವರ ಕೊಲೆಯ ಹಿಂದೆ ಇವಳೊಬ್ಬಳು ಇರಲು ಸಾಧ್ಯವಿಲ್ಲ. ಇನ್ನು ಯಾರಾದರೂ ಇರಬಹುದು ಅನ್ನೋ ತನಿಖೆ ನಡೆಯುತ್ತಿದೆ.