ಪ್ರಜಾಸ್ತ್ರ ಸುದ್ದಿ
ನವದೆಹಲಿ: ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಸಂಬಂಧ ಬಿಜೆಪಿ ಉಸ್ತುವಾರಿಗಳನ್ನು ನೇಮಿಸಿದೆ. ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ, ಗೋವಾ ಹಾಗೂ ಮಣಿಪುರ ಚುನಾವಣೆಗೆ ಉಸ್ತುವಾರಿಗಳನ್ನು ನೇಮಿಸಿದೆ.
ಉತ್ತರ ಪ್ರದೇಶದ ಜವಾಬ್ದಾರಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನಗೆ ನೀಡಲಾಗಿದೆ. ಇವರ ಜೊತೆಗೆ ಅನುರಾಗ ಠಾಕೂರ್, ಶೋಭಾ ಕರಂದ್ಲಾಜೆ, ರಾಮ್ ಮೇಘ್ವಾಲ್, ಅನ್ನಪೂರ್ಣ ದೇವಿ ಸೇರಿದಂತೆ 8 ಸಚಿವರಿಗೆ ಉಸ್ತುವಾರಿ ನೀಡಲಾಗಿದೆ.
ಉತ್ತಾರಖಂಡದ ಮುಖ್ಯ ಉಸ್ತುವಾರಿ ಪ್ರಹ್ಲಾದ್ ಜೋಶಿಗೆ ನೀಡಲಾಗಿದೆ. ದೇವೇಂದ್ರ ಫಡ್ನಾವಿಸಗೆ ಗೋವಾ ಉಸ್ತುವಾರಿ, ಭೂಪೇಂದ್ರ ಯಾದವಗೆ ಮಣಿಪುರ ಉಸ್ತುವಾರಿ ಹಾಗೂ ಪಂಜಾಬ್ ಉಸ್ತುವಾರಿ ಗಜೇಂದ್ರ ಸಿಂಗ್ ಶೇಖಾವತಗೆ ನೀಡಲಾಗಿದೆ. ಈ ಮೂಲಕ ಎಲ್ಲ ಕೇಂದ್ರ ಸಚಿವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ.