ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯ ಇಂಡಿ ಗ್ರಾಮಾಂತರ ಸಿಪಿಐ ಮಲ್ಲಿಕಾರ್ಜುನ ಡಪ್ಪಿನ ಅವರು, ಬೆಳಗಾವಿಯಲ್ಲಿ ನಡೆದ ಉತ್ತರ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ 6 ಚಿನ್ನದ ಪದಕ ಪಡೆದಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ತಾಲೂಕು ತಳವಾರ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಇಂಡಿ ತಾಲೂಕು ತಳವಾರ ಸಮಾಜದ ಅಧ್ಯಕ್ಷ ಧರ್ಮರಾಜ ವಾಲೀಕಾರ, ಸಮಾಜದ ಮುಖಂಡರಾದ ಹುಚ್ಚಪ್ಪ ತಳವಾರ, ಮಡಿವಾಳ ನಾಯ್ಕೋಡಿ, ಮಲ್ಲಣ್ಣ ನಾಯ್ಕೋಡಿ(ಬೆಂಗಳೂರು), ಮಹಾಂತೇಶ ನಾಯ್ಕೋಡಿ ಉಪಸ್ಥಿತರಿದ್ದರು.