ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ಹೃದಯಾಘಾತದಿಂದ ಬೆಂಗಳೂರಿನ ಸಿಪಿಐಯೊಬ್ಬರು ಇಂದು ಮೃತಪಟ್ಟಿದ್ದಾರೆ. ಲಿಂಗರಾಜು(39) ಅನ್ನೋ ಸಿಪಿಐ ಅಧಿಕಾರಿ ನಗರದ ಲಾಡ್ಜ್ ನಲ್ಲಿ ಮೃತಪಟ್ಟಿದ್ದಾರೆ.
ಬೆಂಗಳೂರಿನಿಂದ ನಿನ್ನೆ ಚಿತ್ರದುರ್ಗಕ್ಕೆ ಆಗಮಿಸಿದ್ದರು. ಇಂದು ಮುಂಜಾನೆ ಎದೆನೋವು ಎಂದು ಬಸವೇಶ್ವರ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ.
2007ರಲ್ಲಿ ಪೊಲೀಸ್ ಇಲಾಖೆ ಸೇರಿದ್ದರು. ಈ ಹಿಂದೆ ಪಿಎಸ್ಐ ಆಗಿ ಚಿತ್ರದುರ್ಗದಲ್ಲಿ ಕೆಲಸ ನಿರ್ವಹಿಸಿದ್ದರು. ಚಿಕ್ಕಮಗಳೂರು ಸೇರಿ ಅನೇಕ ಕಡೆ ಲಿಂಗರಾಜು ಕೆಲಸ ಮಾಡಿದ್ದರು.