ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶಾಸಕ ರಮೇಶ ಜಾರಕಿಹೊಳಿ ಅಶ್ಲೀಲ ಸಿಡಿ ಬಿಡುಗಡೆಯಾದ ಬೆನ್ನಲ್ಲೇ ಹಲವು ಸಚಿವರ ಸಿಡಿಗಳಿವೆ ಅನ್ನೋ ಮಾತುಗಳು ಕೇಳಿ ಬಂದ್ವು. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗಳಾದ್ವು. ಅಲ್ದೇ, 6 ಜನ ಸಚಿವರು ಕೋರ್ಟ್ ಮೊರೆ ಹೋಗಿದ್ದು ಸುದ್ದಿಯಾಗಿದೆ.
ಶಿವರಾಂ ಹೆಬ್ಬಾರ, ಡಾ.ಕೆ.ಸಿ ನಾರಾಯಣಗೌಡ, ಡಾ.ಕೆ ಸುಧಾಕರ, ಭೈರತಿ ಬಸವರಾಜ, ಎಸ್.ಟಿ ಸೋಮಶೇಖರ ಹಾಗೂ ಬಿ.ಸಿ ಪಾಟೀಲ ಅವರು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ತಮ್ಮ ವಿರುದ್ಧ ಯಾವುದೇ ಮಾನಹಾನಿ ಹಾಗೂ ಅವಹೇಳನಕಾರಿ ವರದಿ ಪ್ರಸಾರ ಮಾಡದಂತೆ ಅರ್ಜಿ ಸಲ್ಲಿಸಿದ್ದಾರೆ.
ಹೀಗೆ 6 ಜನ ಸಚಿವರು ಅರ್ಜಿ ಸಲ್ಲಿಸಿರುವುದು ಸಹ ಸಾಕಷ್ಟು ಕುತೂಹಲ ಹಾಗೂ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಬಗ್ಗೆ ಕೃಷಿ ಸಚಿವ ಬಿ.ಸಿ ಪಾಟೀಲ ಟ್ವೀಟರ್ ಮೂಲಕ ಕೋರ್ಟ್ ನಲ್ಲಿ ಯಾಕೆ ಅರ್ಜಿ ಸಲ್ಲಿಸಿದ್ದೇವೆ ಅನ್ನೋದಕ್ಕೆ ಸ್ಪಷ್ಟನೆ ನೀಡಿದ್ದಾರೆ.