ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರ ಶನಿವಾರ 7 ಜನ ಕೆಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಕೊಡಗು ಎಡಿಸಿ ಆಗಿ ರಾಜು ಮೊಗವೀರ, ಮೈಸೂರು ವಲಯ ಆಯುಕ್ತರಾಗಿ ವೈ.ಎನ್ ಚಂದ್ರಮ್ಮ, ಸಕಾಲ ಆಡಳಿತಾಧಿಕಾರಿಯಾಗಿ ಎಲ್.ಸಿ ನಾಗರಾಜು, ಬಿಬಿಎಂಪಿ ಸಹಾಯಕ ಆಯುಕ್ತರಾಗಿ ಖಾಜಿ ನಫೀಯಾ, ಶಿಕ್ಷಣ ಇಲಾಖೆಯ ಎಸ್ ಜೆಡಿ ಅಡ್ಮಿನ್ ಆಗಿ ಡಾ.ರೂಪಶ್ರೀ, ಬೆಳಗಾವಿಯ ಪ್ರಿನ್ಸಿಪಾಲ್ ಡಿಟಿಒ ಆಗಿ ವಿಜಯಕುಮಾರ ಹೊನಕೇರಿ ಹಾಗೂ ತುಮಕೂರು-ದಾವಣಗೆರೆ ರೈಲ್ವೆ ಎಸ್ಎಲ್ಎಓ ಪ್ರಸನ್ನಕುಮಾರ್ ವಿ.ಕೆ ಅವರನ್ನ ವರ್ಗಾವಣೆ ಮಾಡಲಾಗಿದೆ.