ಬೆಂಗಳೂರು: ಕರೋನಾ ಮುಂಜಾನೆಯ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಮತ್ತೆ 28 ಕೇಸ್ ದಾಖಲಾಗಿವೆ. ಅದರಲ್ಲಿ ದಾವಣಗೆರೆಯ 21 ಕೇಸ್ ನಿನ್ನೆ ಸಂಜೆಯೇ ಪತ್ತೆಯಾಗಿತ್ತು. ಈ 21 ಸೇರಿ ಮಂಡ್ಯ 2, ಕಲಬುರಗಿ 2, ಹಾವೇರಿ 1, ವಿಜಯಪುರ 1, ಚಿಕ್ಕಬಳ್ಳಾಪುರ 1 ಹೊಸ ಪ್ರಕರಣ ದಾಖಲಾಗಿವೆ.
ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 642ಕ್ಕೆ ಏರಿಕೆಯಾಗಿದೆ. 304 ಮಂದಿ ಗುಣಮುಖರಾಗಿದ್ದು, 312 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 26 ಮಂದಿ ಸಾವನ್ನಪ್ಪಿದ್ದಾರೆ.