ಪ್ರಜಾಸ್ತ್ರ ಅಪರಾಧ ಸುದ್ದಿ
ಸಿಂದಗಿ: ಪಟ್ಟಣದಲ್ಲಿರುವ ಐಸಿಐಸಿಐ ಬ್ಯಾಂಕ್ ಎಟಿಎಂ ಸೆಕ್ಯೂರಿಟಿ ಗಾರ್ಡ್ ನನ್ನ ಹತ್ಯೆ ಮಾಡಲಾಗಿದೆ. ರಾತ್ರಿ ಸುಮಾರು 1.30ರ ಟೈಂನಲ್ಲಿ ಈ ಒಂದು ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ. 25 ವರ್ಷದ ರಾಹುಲ ಖೀರು ರಾಠೋಡ ಅನ್ನೋ ಸೆಕ್ಯೂರಿಟಿ ಗಾರ್ಡ್ ಹತ್ಯೆಯಾಗಿದೆ. ಇದ್ರಿಂದಾಗಿ ಸಿಂದಗಿಯ ಜನತೆ ಬೆಚ್ಚಿ ಬಿದ್ದಿದ್ದಾರೆ.
ಕಳ್ಳರು ಮರ್ಡರ್ ಮಾಡಿ ಹಣ ದೋಚಲು ಪ್ರಯತ್ನಿಸಿದ್ದಾರೆ. ಬಳಿಕ ಎಟಿಎಂ ಸೈರನ್ ಶಬ್ದಕ್ಕೆ ಓಡಿ ಹೊಗಿದ್ದಾರೆ. ಆದ್ರೆ, ಇದಕ್ಕೂ ಮೊದ್ಲು ಸೆಕ್ಯೂರಿಟಿ ಗಾರ್ಡ್ ನ ತಲೆಗೆ ರಾಡ್ ನಿಂದ ಹೊಡೆದಿದ್ದಾರೆ. ಕೊಲೆಯಾದ ರಾಹುಲ ಖೀರು ರಾಠೋಡ ಮದಬಾವಿ ತಾಂಡಾ ನಿವಾಸಿ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಸಿಪಿಐ ಹೆಚ್.ಎಂ ಪಟೇಲ ಸೇರಿದಂತೆ ಪೊಲೀಸ್ ಸಿಬ್ಬಂದಿ ಆಗಮಿಸಿದ್ದು, ಡಾಗ್ ಸ್ವ್ಕಾಡ್ ಸಹ ಬಂದಿದ್ದು, ಪರಿಶೀಲನೆ ಮಾಡಲಾಗ್ತಿದೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.